ADVERTISEMENT

ರಾಜೀನಾಮೆ ನೀಡಿರುವ ಶಾಸಕರು ಸದನಕ್ಕೆ ಗೈರು, ಸಂಭಾವ್ಯ ಪಟ್ಟಿಯಲ್ಲಿರುವವರು ಹಾಜರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 18:58 IST
Last Updated 12 ಜುಲೈ 2019, 18:58 IST
ಶುಕ್ರವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಶಾಸಕಿಯರುಗಳಾದ ಸೌಮ್ಯ ರೆಡ್ಡಿ ಹಾಗು ಅಂಜಲಿ ಲಿಂಬಾಳ್ಕರ್‌ ಅವರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌-Photo/ Krishnakumar P S
ಶುಕ್ರವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಶಾಸಕಿಯರುಗಳಾದ ಸೌಮ್ಯ ರೆಡ್ಡಿ ಹಾಗು ಅಂಜಲಿ ಲಿಂಬಾಳ್ಕರ್‌ ಅವರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌-Photo/ Krishnakumar P S   

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 16 ಶಾಸಕರು ವಿಧಾನಸಭಾ ಅಧಿವೇಶನಕ್ಕೆ ಶುಕ್ರವಾರ ಗೈರಾದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರ(ಸಂಭಾವ್ಯ) ಪಟ್ಟಿಯಲ್ಲಿ ಹೆಸರು ಕೇಳಿ ಬಂದ ಶಾಸಕರೆಲ್ಲ ಸದನಕ್ಕೆ ಬಂದರು.

ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್‌, ಸೌಮ್ಯಾ ರೆಡ್ಡಿ, ಗಣೇಶ್‌ ಹುಕ್ಕೇರಿ, ಎಸ್‌.ರಾಮಪ್ಪ, ಎಸ್‌.ಎನ್‌.ಸುಬ್ಬಾರೆಡ್ಡಿ, ಭೀಮಾ ನಾಯ್ಕ, ಬಸವರಾಜ ದದ್ದಲ್‌, ಬಿ.ಕೆ.ಸಂಗಮೇಶ್ವರ, ಜೆಡಿಎಸ್‌ನ ಶ್ರೀನಿವಾಸ ಗೌಡ ಇಡೀ ದಿನದ ಕಲಾಪದಲ್ಲಿ ಭಾಗಿಯಾದರು.ಸೌಮ್ಯಾ ರೆಡ್ಡಿ ಹಾಗೂ ಅಂಜಲಿ ನಿಂಬಾಳ್ಕರ್‌ ಜತೆಗೆ ಸಚಿವ ಡಿ.ಕೆ.ಶಿವಕುಮಾರ್ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT