ADVERTISEMENT

ರಾಮ–ರಹೀಮ್ ಜತೆ ದೇಶ ಭಕ್ತಿಯನ್ನೂ ಗಟ್ಟಿಗೊಳಿಸುವ ಕಾಲ: ಪ್ರಧಾನಿ ಮೋದಿ

ಅಯೋಧ್ಯೆ ತೀರ್ಪಿಗೆ ಪ್ರತಿಕ್ರಿಯೆ

ಏಜೆನ್ಸೀಸ್
Published 9 ನವೆಂಬರ್ 2019, 7:48 IST
Last Updated 9 ನವೆಂಬರ್ 2019, 7:48 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ:ಅಯೋಧ್ಯೆಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಿದೆ. ಇದು ಯಾರ ಗೆಲುವೂ ಅಲ್ಲ, ಯಾರ ಸೋಲೂ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅಯೋಧ್ಯೆ ತೀರ್ಪಿಗೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಮ ಭಕ್ತಿಯೇ ಇರಲಿ ರಹೀಮ್ ಭಕ್ತಿಯೇ ಇರಲಿ, ಇದು ದೇಶ ಭಕ್ತಿಯ ಶಕ್ತಿಯನ್ನು ಗಟ್ಟಿಗೊಳಿಸುವ ಕಾಲ. ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟು ಕಾಯ್ದುಕೊಳ್ಳಬೇಕೆಂದು ದೇಶದ ಜರಿಗೆ ಮನವಿ ಮಾಡುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ನ ಈ ತೀರ್ಪು ಹಲವು ಕಾರಣಗಳಿಗಾಗಿ ಮುಖ್ಯವಾದದ್ದು. ವಿವಾದವನ್ನು ಪರಿಹರಿಸುವಾಗ ಹೇಗೆ ಕಾನೂನು ಪ್ರಕ್ರಿಯೆಯನ್ನು ಪಾಲಿಸಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ. ಉಭಯ ಕಕ್ಷಿದಾರರಿಗೆ ವಾದ ಮಂಡಿಸಲು ಸಮಾನ ಸಮಯ ನೀಡಲಾಗಿದೆ. ನಮ್ಮ ನ್ಯಾಯ ದೇವಾಲಯವು ದಶಕಗಳಷ್ಟು ಹಳೆಯ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿದೆ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಜನಸಾಮಾನ್ಯರಿಗಿರುವ ವಿಶ್ವಾಸವನ್ನು ಈ ತೀರ್ಪು ಗಟ್ಟಿಗೊಳಿಸಿದೆ. ನಮ್ಮ ದೇಶವು ಸಾವಿರಾರು ವರ್ಷಗಳ ಭ್ರಾತೃತ್ವದ ಇತಿಹಾಸ ಹೊಂದಿದ್ದು, ಅದರ ಆಧಾರದಲ್ಲಿ ನಾವು 130 ಕೋಟಿ ಜನರಿಗೆ ಶಾಂತಿ ಮತ್ತು ಸಂಯಮವನ್ನು ಪರಿಚಯಿಸಬೇಕು. ಶಾಂತಿಯುತ ಸಹಬಾಳ್ವೆಯನ್ನು ಪರಿಚಯಿಸಬೇಕು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.