ADVERTISEMENT

ತಂಬಾಕು ಹಂಚಿಕೆಯಲ್ಲಿ ಉಂಟಾದ ಜಗಳ: ವ್ಯಕ್ತಿಯನ್ನೇ ಕೊಂದ ಭಿಕ್ಷುಕ

ಪಿಟಿಐ
Published 15 ಮಾರ್ಚ್ 2025, 10:38 IST
Last Updated 15 ಮಾರ್ಚ್ 2025, 10:38 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಲಾತೂರ್: ತಂಬಾಕು ಹಂಚಿಕೆಯ ವಿಷಯದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.

ಮಹಾರಾಷ್ಟ್ರದ ಲಾತೂರಿನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿ ವಾಸಿಸುವ ವ್ಯಕ್ತಿ ಹಾಗೂ ಭಿಕ್ಷಕುನೊಬ್ಬನ ನಡುವೆ ತಂಬಾಕು ಹಂಚಿಕೊಳ್ಳುವ ವಿಷಯದಲ್ಲಿ ಜಗಳ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ ಪರಿಣಾಮ, ವ್ಯಕ್ತಿಯ ತಲೆಗೆ ಭಿಕ್ಷುಕ ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮೃತ ವ್ಯಕ್ತಿಯನ್ನು ಪ್ರಕಾಶ ಭಾಡ್ಕೆ ಎಂದು ಗುರುತಿಸಲಾಗಿದೆ. ಇವರೂ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಆರೋಪಿಯನ್ನು ದೇವಿದಾಸ್ ಸೋನ್‌ಕಾಂಬ್ಳೆ ಎಂದು ಗುರುತಿಸಲಾಗಿದೆ.

ಲಾತೂರ್‌ನ ಕ್ರೀಡಾ ಸಂಕೀರ್ಣ ಬಳಿ ಈ ಘಟನೆ ನಡೆದಿದ್ದು, ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ ದೇವಿದಾಸ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.