ADVERTISEMENT

ಕುಂಭಮೇಳದಲ್ಲಿ ಸಂಪುಟ ಸಭೆ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಮುಖ್ಯಮಂತ್ರಿ-ಸಚಿವರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 18:23 IST
Last Updated 29 ಜನವರಿ 2019, 18:23 IST
ಕುಂಭಮೇಳದಲ್ಲಿ ಮಂಗಳವಾರ ಸಂಪುಟ ಸಭೆಗೂ ಮೊದಲು ತ್ರಿವೇಣಿ ಸಂಗಮದಲ್ಲಿ ಮಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಸಂಪುಟ ಸದಸ್ಯರು ಪಿಟಿಐ ಚಿತ್ರ
ಕುಂಭಮೇಳದಲ್ಲಿ ಮಂಗಳವಾರ ಸಂಪುಟ ಸಭೆಗೂ ಮೊದಲು ತ್ರಿವೇಣಿ ಸಂಗಮದಲ್ಲಿ ಮಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಸಂಪುಟ ಸದಸ್ಯರು ಪಿಟಿಐ ಚಿತ್ರ   

ಅಲಹಾಬಾದ್‌: ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಇದೇ ಮೊದಲ ಬಾರಿಗೆ ಮಂಗಳವಾರ ಕುಂಭಮೇಳದಲ್ಲಿ ನಡೆಯಿತು. ಲಖನೌದಿಂದ ಆಗಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಪುಟ ಸಹೋದ್ಯೋಗಿಗಳು ಸಾಧು–ಸಂತರ ಜತೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.

ಅಲ್ಲಿಂದ ನೇರ ಹನುಮಾನ ಮಂದಿರ, ಸರಸ್ವತಿ ಕೂಪ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕುಂಭಮೇಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಟೆಂಟ್‌ನಲ್ಲಿರುವ ಸಮಗ್ರ ನಿಯಂತ್ರಣ ಮತ್ತು ಮುಖ್ಯ ಕೇಂದ್ರದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನೇಕ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT