ನವದೆಹಲಿ: ಅಸ್ಸಾಂನಿಂದ ರಿಪುನ್ ಬೋರಾ ಮತ್ತು ಕೇರಳದಿಂದ ಜೆಬಿ ಮೆಥರ್ ಅವರನ್ನು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆ.
ಬೋರಾ ಮತ್ತು ಮೆಥರ್ ಅವರನ್ನು ಅಭ್ಯರ್ಥಿಗಳನ್ನಾಗಿಸುವ ಪ್ರಸ್ತಾವಕ್ಕೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅನುಮೋದನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ | ಜಿ–23 ಮುಖಂಡರ ಜತೆ ಸಂಧಾನ?
ರಾಜ್ಯಸಭೆಯ 13 ಸ್ಥಾನಗಳ ಭರ್ತಿಗೆ ಮಾರ್ಚ್ 31ರಂದು ಚುನಾವಣೆ ನಡೆಯಲಿದೆ.
ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ನಾಗಾಲ್ಯಾಂಡ್ ಹಾಗೂ ತ್ರಿಪುರಾದ ರಾಜ್ಯಸಭೆ ಸದಸ್ಯರು ಏಪ್ರಿಲ್ 12ರಂದು ನಿವೃತ್ತರಾಗಲಿದ್ದಾರೆ. ಪಂಜಾಬ್ನಿಂದ ಆಯ್ಕೆಯಾಗಿದ್ದ ಐವರು ಸದಸ್ಯರು ಏಪ್ರಿಲ್ 9ರಂದು ನಿವೃತ್ತರಾಗಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.