ADVERTISEMENT

ಗಾಂಧೀಜಿ ಅವರ 'ಮಾಡು, ಇಲ್ಲವೆ ಮಡಿ' ಘೋಷಣೆಗೆ ರಾಹುಲ್‌ ಹೊಸ ವ್ಯಾಖ್ಯಾನ

'ಹೆದರಬೇಡಿ, ನ್ಯಾಯಕ್ಕಾಗಿ ಹೋರಾಡಿ'  ಎಂದ ಕಾಂಗ್ರೆಸ್‌ ನಾಯಕ

ಪಿಟಿಐ
Published 8 ಆಗಸ್ಟ್ 2020, 13:01 IST
Last Updated 8 ಆಗಸ್ಟ್ 2020, 13:01 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕ್ವಿಟ್ ಇಂಡಿಯಾ ಆಂದೋಲನದ 78ನೇ ವಾರ್ಷಿಕೋತ್ಸವ ಸ್ಮರಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು,ಆಂದೋಲನ ಆರಂಭವಾದಾಗ ಗಾಂಧೀಜಿ ಅವರು ನೀಡಿದ್ದ 'ಮಾಡು, ಇಲ್ಲವೆ ಮಡಿ' ಘೋಷಣೆಗೆ 'ಹೆದರಬೇಡಿ, ನ್ಯಾಯಕ್ಕಾಗಿ ಹೋರಾಡಿ'ಎಂಬಹೊಸ ವ್ಯಾಖ್ಯಾನ ನೀಡಬೇಕಾಗಿದೆ ಎಂದಿದ್ದಾರೆ.

1942ರ ಆಗಸ್ಟ್ 8 ರಂದು ಬಾಂಬೆಯಲ್ಲಿ ನಡೆದಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಮ್ಮೇಳನದಲ್ಲಿ ಗಾಂಧೀಜಿ ಅವರು,ದೇಶದಲ್ಲಿ ಬ್ರಿಟಿಷ್ ಆಳ್ವಿಕೆಗೆ ಅಂತ್ಯವಾಡಲು ಆಗ್ರಹಿಸಿ ಕ್ವಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದರು. ಜನರು ಭಾಗವಹಿಸಬೇಕು ಎಂದು ಕರೆ ನೀಡುತ್ತಾ 'ಮಾಡಿ, ಇಲ್ಲವೇ ಮಡಿಯಿರಿ' ಎಂದು ಘೋಷಿಸಿದ್ದರು.

ಈ ಘೋಷಣೆಗೆ ಈಗ ಹೊಸ ವ್ಯಾಖ್ಯಾನ ನೀಡಬೇಕಿದೆ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.