ADVERTISEMENT

ಹಿಜಾಬ್‌ ವಿವಾದ: ಕರಾವಳಿಯ ಕೆಲ ದುಷ್ಟ ಹಿತಾಸಕ್ತಿಗಳು ಕಾರಣ- ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 16:00 IST
Last Updated 7 ಫೆಬ್ರುವರಿ 2022, 16:00 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ನವದೆಹಲಿ: ‘ಹಿಜಾಬ್‌ ವಿವಾದವು ವಿದ್ಯಾರ್ಥಿಗಳ ಸೃಷ್ಟಿಯಲ್ಲ. ಇದರ ಹಿಂದೆ ಕರಾವಳಿ ಕರ್ನಾಟಕ ಭಾಗದ, ದುಷ್ಟ ಹಿತಾಸಕ್ತಿ ಹೊಂದಿರುವ ಕೆಲವರ ಕೈವಾಡವಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಹೇಳಿದರು.

‘ಈ ವಿಷಯದಲ್ಲಿ ಮುಸಲ್ಮಾನ ಮತ್ತು ಹಿಂದೂ ಸಮುದಾಯದ ವಿದ್ಯಾರ್ಥಿಗಳ ಹಾದಿತಪ್ಪಿಸುವ ಕೆಲಸವಾಗಿದೆ. ವಿದ್ಯಾರ್ಥಿಗಳು ಈ ವಿಷಯದಲ್ಲಿ ಅಮಾಯಕರು’ ಎಂದು ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಕರಾವಳಿ ಕರ್ನಾಟಕ ಭಾಗದ ಸಣ್ಣ ರಾಜಕೀಯ ಸಂಘಟನೆಯೊಂದು ಈ ವಿವಾದದ ಕಿಡಿಯನ್ನು ಹೊತ್ತಿಸಿದೆ. ಈಗ ಎರಡೂ ರಾಷ್ಟ್ರೀಯ ಪಕ್ಷಗಳು (ಕಾಂಗ್ರೆಸ್, ಬಿಜೆಪಿ) ಅದರಿಂದ ರಾಜಕೀಯ ಲಾಭವನ್ನು ಪಡೆಯುತ್ತಿವೆ ಎಂದು ಹೇಳಿದರು.

ADVERTISEMENT

ವಿದ್ಯಾರ್ಥಿ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಈ ವಿವಾದವನ್ನು ಕೂಡಲೇ ಹತ್ತಿಕ್ಕಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.