ADVERTISEMENT

ಐ ಲವ್ ಯೂ... ದೆಹಲಿ ಜನತೆಗೆ ಧನ್ಯವಾದ ಹೇಳಿದ ಅರವಿಂದ ಕೇಜ್ರಿವಾಲ್ 

ಪಿಟಿಐ
Published 11 ಫೆಬ್ರುವರಿ 2020, 14:42 IST
Last Updated 11 ಫೆಬ್ರುವರಿ 2020, 14:42 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುಮತ್ತು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಐ ಲವ್ ಯೂಎಂದಿದ್ದಾರೆ.

ನನ್ನನ್ನು ಮಗನೆಂದು ಪರಿಗಣಿಸಿದದೆಹಲಿ ಜನರ ಗೆಲುವು ಇದು. ಹನುಮಾನ್ ನಮ್ಮನ್ನು ಆಶೀರ್ವದಿಸಿದ್ದಾರೆ. ದೆಹಲಿಯಜನರ ಅಭಿವೃದ್ದಿಗಾಗಿ ದುಡಿಯಲು ದೇವರು ನಮಗೆ ಹೆಚ್ಚಿನ ಶಕ್ತಿ ನೀಡಲು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು ಇಲ್ಲಿಯವರಿಗೆ ಆಮ್ ಆದ್ಮಿ ಪಕ್ಷ 70 ಸೀಟುಗಳ ಪೈಕಿ 63ರಲ್ಲಿ ಮುನ್ನಡೆ ಸಾಧಿಸಿದೆ.

ADVERTISEMENT

ದೆಹಲಿಯಲ್ಲಿ ರಾಜಕೀಯ ಕೆಲಸ ಜನ್ಮ ತಾಳಿದೆ ಮತ್ತು ಎಎಪಿಯ ಗೆಲುವುದೇಶದ ಗೆಲುವು ಆಗಿದೆ. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಮುನ್ನ ಕೇಜ್ರಿವಾಲ್ 'ಭಾರತ್ ಮಾತಾ ಕೀ ಜೈ' 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆ ಕೂಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.