ADVERTISEMENT

ಕೆಂಪುಕೋಟೆಯಲ್ಲಿ ನಡೆದ ಘಟನೆ ವಿಷಾದಕರ: ಆರ್‌ಎಸ್‌ಎಸ್‌

ಪಿಟಿಐ
Published 26 ಜನವರಿ 2021, 19:50 IST
Last Updated 26 ಜನವರಿ 2021, 19:50 IST
ಸುರೇಶ್‌ ಭೈಯಾಜಿ ಜೋಶಿ
ಸುರೇಶ್‌ ಭೈಯಾಜಿ ಜೋಶಿ   

ನವದೆಹಲಿ: ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಖಂಡನೆ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು(ಆರ್‌ಎಸ್‌ಎಸ್‌), ಕೆಂಪುಕೋಟೆಯಲ್ಲಿ ನಡೆದ ‘ದುರದೃಷ್ಟಕರ ವರ್ತನೆಯು’, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿದವರಿಗೆ ಮಾಡಿದ ಅವಮಾನ ಎಂದು ಟೀಕಿಸಿದೆ.

‘ಪವಿತ್ರವಾದ ಗಣರಾಜ್ಯೋತ್ಸವ ದಿನದಂದು, ದೆಹಲಿಯಲ್ಲಿ ನಡೆದ ಹಿಂಸೆ ಹಾಗೂ ಘರ್ಷಣೆ ವಿಷಾದನೀಯ’ ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭೈಯಾಜಿ ಪ್ರಕಟಣೆಯಲ್ಲಿ ಹೇಳಿದ್ದಾರೆ.ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಬದಲಾಗಿ ಅನ್ಯ ಧ್ವಜವನ್ನು ಹಾರಿಸುವುದು ದುರದೃಷ್ಟಕರ ವರ್ತನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ದೇಶದ ಎಲ್ಲ ಜನರೂ ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹೊರಬಂದು, ಶಾಂತಿಗೆ ಆದ್ಯತೆ ನೀಡಬೇಕು ಎಂದು ಆರ್‌ಎಸ್‌ಎಸ್‌ ಹೇಳಿದೆ.

ಇವುಗಳನ್ನೂ ಓದಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.