ADVERTISEMENT

ಬಿಳಿ ಬಾವುಟ ತೋರಿಸಿ, ಶವ ತಗೊಂಡು ಹೋಗಿ: ಪಾಕಿಸ್ತಾನಕ್ಕೆ ಸೇನೆಯ ಸೂಚನೆ

ಕಲ್ಯಾಣ್‌ ರೇ
Published 4 ಆಗಸ್ಟ್ 2019, 5:12 IST
Last Updated 4 ಆಗಸ್ಟ್ 2019, 5:12 IST
   

ನವದೆಹಲಿ: ಉತ್ತರ ಕಾಶ್ಮೀರದಕುಪ್ವಾರ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯಗಡಿ ನಿಯಂತ್ರಣ ರೇಖೆಯ ಸಮೀಪ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಪಾಕಿಸ್ತಾನೀಯರ ಶವಗಳನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದು, ಅಂತಿಮ ಸಂಸ್ಕಾರ ನೆರವೇರಿಸಲುಭಾರತೀಯ ಸೇನೆಯು ಅವಕಾಶ ಮಾಡಿಕೊಟ್ಟಿದೆ.

‘ಬಿಳಿ ಬಾವುಟ ಹಿಡಿದು ಬನ್ನಿ. ಐದು ಶವಗಳನ್ನು ತೆಗೆದುಕೊಂಡು ಹೋಗಿ, ಅಂತಿಮ ಸಂಸ್ಕಾರ ಮಾಡಿ’ ಭಾರತೀಯ ಸೇನೆಯು ಪಾಕ್ ಸೇನೆಗೆ ಸೂಚಿಸಿದೆ ಎಂದು ಸೇನೆಯಮೂಲಗಳು ತಿಳಿಸಿವೆ.

ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತೆ ಇರುವದಟ್ಟಕಾಡಿನಲ್ಲಿ ಈ ಶವಗಳು ಪತ್ತೆಯಾಗಿವೆ. ಈ ಶವಗಳುಪಾಕಿಸ್ತಾನದ ಭಯೋತ್ಪಾದಕರು ಅಥವಾ ವಿಶೇಷ ಕಾರ್ಯಪಡೆ ಸಿಬ್ಬಂದಿಯದ್ದು ಆಗಿರಬಹುದುಎಂದು ಸೇನೆ ಹೇಳಿದೆ.ಸೇನೆಯ ಬಳಿ ನಾಲ್ಕು ಶವಗಳ ಫೋಟೊಗಳು ಇವೆ. ಇದು ದುರ್ಗಮ ಪ್ರದೇಶ. ಅಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶವಗಳು ಇರಬಹುದು ಎಂದು ಸೇನೆ ಹೇಳಿದೆ.

ADVERTISEMENT

ಭಾರತೀಯ ಸೇನೆಯ ಪ್ರಸ್ತಾವಕ್ಕೆ ಪಾಕ್ ಸೇನೆ ಈವರೆಗೂ ಪ್ರತಿಕ್ರಿಯಿಸಿಲ್ಲ.ಜಮ್ಮು ಮತ್ತು ಕಾಶ್ಮೀರದ ಗಡಿಗುಂಟ ಕಳೆದ ವಾರದಲ್ಲಿ ಒಳನುಸುಳುವ ಪ್ರಯತ್ನಗಳು ಹೆಚ್ಚಾಗಿದ್ದವು. ಕದನ ವಿರಾಮ ಉಲ್ಲಂಘನೆಯೂ ಅವ್ಯಾಹತ ಮುಂದುವರಿದಿತ್ತು.

ಸೇನೆಯು ಪರಿಸ್ಥಿತಿಯನ್ನು ವೃತ್ತಿಪರವಾಗಿ ಎದುರಿಸಿ ಭಾರತದೊಳಗೆ ನುಸುಳಲು ಕಾದು ನಿಂತಿದ್ದ ಭಯೋತ್ಪಾದಕರನ್ನು ಕೊಂದು ಹಾಕಿತ್ತು. ‘ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ ನಿಗ್ರಹಿಸಲು ಗಮನ ಕೊಡದ ಪಾಕಿಸ್ತಾನ, ಭಾರತೀಯ ಸೇನೆಯ ದಾಳಿಯ ಬಗ್ಗೆ ಅಪಪ್ರಚಾರ ನಡೆಸುತ್ತಿದೆ’ ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.