ನವದೆಹಲಿ:ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಬುಧವಾರ ರಾತ್ರಿಯಿಂದ ತಾತ್ಕಾಲಿಕವಾಗಿ ವಿಮಾನಗಳ ಹಾರಟವನ್ನು ರದ್ದುಗೊಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಜೆಟ್ ಬಿಕ್ಕಟ್ಟು– ಕಾಣದ ಪರಿಹಾರ
ಜೆಟ್ ಏರ್ವೇಸ್ನ ವಿಮಾನ ಸೇವೆಗಳಲ್ಲಿ ಅಡಚಣೆ ಉಂಟಾಗುವುದನ್ನು ತಪ್ಪಿಸಲು ಜೆಟ್ ಏರ್ವೇಸ್ ಸಂಸ್ಥೆ ಎಸ್ಬಿಐ ನೇತೃತ್ವದಲ್ಲಿನ 26 ಬ್ಯಾಂಕ್ಗಳ ಒಕ್ಕೂಟದಿಂದ ತುರ್ತು ಹಣಕಾಸು ನೆರವು ಕೋರಿತ್ತು. ತುರ್ತಾಗಿ ₹ 400 ಕೋಟಿ ನೀಡುವಂತೆ ಮನವಿ ಮಾಡಿತ್ತು.
ಆದರೆಎಸ್ಬಿಐ ನೇತೃತ್ವದಲ್ಲಿನ ಬ್ಯಾಂಕ್ಗಳು ತುರ್ತಾಗಿ ₹400 ಕೋಟಿ ನೀಡಲು ನಿರಾಕರಿಸಿರುವುದರಿಂದ ಜೆಟ್ ಏರ್ವೇಸ್ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಇಂದು ರಾತ್ರಿಯಿಂದ ನಿಲ್ಲಿಸಲಿದೆ.
ಇವನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.