ADVERTISEMENT

ಕೇರಳ ವಿಮಾನ ದುರಂತ: ಮೃತ ಸಹ ಪೈಲಟ್‌ ಅಖಿಲೇಶ್‌ ಕುಮಾರ್‌ಗೆ ಶ್ರದ್ದಾಂಜಲಿ

ಪಿಟಿಐ
Published 9 ಆಗಸ್ಟ್ 2020, 7:56 IST
Last Updated 9 ಆಗಸ್ಟ್ 2020, 7:56 IST
ಅಖಿಲೇಶ್ ಕುಮಾರ್
ಅಖಿಲೇಶ್ ಕುಮಾರ್   

ನವದೆಹಲಿ: ಕೋಯಿಕ್ಕೋಡ್‌ನ ಕರಿಪ್ಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ ಸಹ ಪೈಲಟ್‌ ಅಖಿಲೇಶ್‌ ಕುಮಾರ್‌ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಾನುವಾರ ಬೆಳಗಿನ ಜಾವ 2 ಗಂಟೆಗೆಅಖಿಲೇಶ್‌ ಕುಮಾರ್‌ ಅವರ ಮೃತದೇಹವು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲು‍ಪಿದೆ. ಈ ವೇಳೆ ವಿವಿಧ ವಿಮಾನಯಾನ ಸಂಸ್ಥೆಯ 200 ಕ್ಕೂ ಹೆಚ್ಚು ಪೈಲೆಟ್‌ ಮತ್ತು ಸಿಬ್ಬಂದಿ ಅಖಿಲೇಖ್‌ ಕುಮಾರ್‌ಗೆ ಶ್ರದ್ಧಾಂಜಲಿ ನೀಡಿದರು.

ಶುಕ್ರವಾರ ಸಂಜೆ 7.40ಕ್ಕೆ ದುಬೈಯಿಂದ ಬಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೆ ಗುರಿಯಾಗಿತ್ತು. ದುರಂತದಲ್ಲಿವಿಮಾನದ ಪೈಲಟ್ ಕ್ಯಾಪ್ಟನ್‌ ದೀಪಕ್‌ ಸಾಠೆ ಮತ್ತು ಸಹ ಪೈಲಟ್‌ ಅಖಿಲೇಶ್ ಕುಮಾರ್ ಅವರ ಸೇರಿದಂತೆ 16 ಮಂದಿ ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.