ನಾಗಪುರ: ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಇಬ್ಬರು ಮುಸ್ಲಿಂ ಸ್ನೇಹಿತರು ಆಹಾರ ಸಾಮಗ್ರಿಗಳು, ಸಿದ್ಧಪಡಿಸಿದ ಆಹಾರ ಹಾಗೂ ಹಣ್ಣುಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ತಮ್ಮ ಈ ಕಾರ್ಯಕ್ಕೆ ಅವರು ‘ಫುಡ್ ಫಾರ್ ಕರ್ಫ್ಯೂ’ ಎಂದು ಹೆಸರಿಟ್ಟುಕೊಂಡಿದ್ದಾರೆ.
‘ಮಿತ್ರರು, ಹಿತೈಷಿಗಳ ಸಹಕಾರದಿಂದಾಗಿ ದಿನಗೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಅನಾಥರಿಗೆ ಹಾಗೂ ನಗರದ ವಿವಿಧೆಡೆ ಸಿಲುಕಿಕೊಂಡಿರುವವರಿಗೆ ನೆರವು ನೀಡುತ್ತಿದ್ದೇವೆ. ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸಹ ಒದಗಿಸುತ್ತಿದ್ದೇವೆ’ ಎಂದು ಸ್ನೇಹಿತರಾದ ಹುಸೇನ್ ಶಬ್ಬಿರ್ (37) ಹಾಗೂ ಹುಜೈಫಾ ಹುಸೇನ್ (36) ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.