ADVERTISEMENT

ವಾಮಾಚಾರ ಶಂಕೆ: ಯುವಕನ ಥಳಿಸಿ ಸುಟ್ಟ ಜನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:35 IST
Last Updated 19 ಸೆಪ್ಟೆಂಬರ್ 2019, 19:35 IST
ಬೋಯಿನಿ ಅಂಜನೇಯಲು
ಬೋಯಿನಿ ಅಂಜನೇಯಲು   

ಹೈದರಾಬಾದ್: ವಾಮಾಚಾರ ಶಂಕೆಯ ಮೇಲೆ 24 ವರ್ಷದ ಯುವಕನನ್ನು ಥಳಿಸಿ, ಬೆಂಕಿಹಚ್ಚಿ ಸುಟ್ಟುಹಾಕಿದ ಘಟನೆ ತೆಲಂಗಾಣದ ಶಮೀರ್‌ಪುರ ಸಮೀಪದ ಅದ್ರಸಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

45 ವರ್ಷದ ಲಕ್ಷ್ಮಿ ಎಂಬುವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ ಮಹಿಳೆ ಸಾವಿಗೆ ಅದೇ ಗ್ರಾಮದ ಯುವಕ ಬೋಯಿನಿ ಆಂಜನೇಯಲು ಮಾಡಿದ್ದ ವಾಮಾಚಾರ ಕಾರಣ ಎಂದು ಆಕೆಯ ಸಂಬಂಧಿಕರು ಶಂಕಿಸಿದ್ದರು. ಸ್ಥಳಕ್ಕೆ ಬಂದ ಬೋಯಿನಿಯನ್ನು ಹಿಡಿದು ಥಳಿಸಿ ಸಾಯಿಸಿದ ಸಂಬಂಧಿಕರು, ಮಹಿಳೆಯ ಚಿತೆಗೇ ದೇಹವನ್ನು ಎಸೆದು ಸುಟ್ಟುಹಾಕಿದ್ದರು ಎಂದು ಶಮೀರ್‌ಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT