ADVERTISEMENT

ಸ್ತಬ್ಧಚಿತ್ರಕ್ಕೆ ಸಿಗದ ಅವಕಾಶ: ಕೇಂದ್ರದ ವಿರುದ್ಧ ಪಂಜಾಬ್ ಸಿಎಂ ಮಾನ್ ಕಿಡಿ

ಪಿಟಿಐ
Published 26 ಜನವರಿ 2024, 14:59 IST
Last Updated 26 ಜನವರಿ 2024, 14:59 IST
<div class="paragraphs"><p>ಭಗವಂತ ಮಾನ್</p></div>

ಭಗವಂತ ಮಾನ್

   

ಚಂಡೀಗಢ: ‘ತಾಯ್ನಾಡಿಗಾಗಿ ತ್ಯಾಗ ಮಾಡಿದ ಅಸಂಖ್ಯಾತರನ್ನು ಹೊಂದಿರುವ ರಾಜ್ಯದ ಸ್ತಬ್ಧಚಿತ್ರವು, ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಇಲ್ಲದಿರುವುದನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು.

ಲೂಧಿಯಾನದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿಯು, ‘ಕೇಂದ್ರವು ತಿರಸ್ಕರಿಸಿದ ಸ್ತಬ್ಧಚಿತ್ರಗಳನ್ನು ರಾಜ್ಯದ ಪರೇಡ್‌ನಲ್ಲಿ ಪ್ರದರ್ಶಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಪಂಜಾಬ್‌ ಅತ್ಯಂತ ನಿಷ್ಠೆ ಹೊಂದಿದ ರಾಜ್ಯವಾಗಿದೆ. ಈ ನಿಷ್ಠೆಯನ್ನು ಅನುಮಾನಿಸುತ್ತಿದ್ದೀರಿ ಎಂಬಂತಹ ಪರಿಸ್ಥಿತಿ ಸೃಷ್ಟಿಸಬಾರದು’ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

‘ಪಂಜಾಬ್ ವಿರೋಧಿ ರೋಗದಿಂದಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಸ್ತಬ್ಧಚಿತ್ರವನ್ನು ತಿರಸ್ಕರಿಸಿದೆ’ ಎಂದು ಮುಖ್ಯಮಂತ್ರಿ ಈಚೆಗಷ್ಟೇ ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.