ADVERTISEMENT

ಪಟ್ನಾ: ನಿತೀಶ್‌ ಹಿಜಾಬ್ ತೆಗೆದಿದ್ದ ವಿವಾದ; ಕೆಲಸಕ್ಕೆ ಹಾಜರಾದ ಆಯುಷ್‌ ವೈದ್ಯೆ

ಪಿಟಿಐ
Published 7 ಜನವರಿ 2026, 16:45 IST
Last Updated 7 ಜನವರಿ 2026, 16:45 IST
   

ಪಟ್ನಾ: ನೇಮಕಾತಿ ಪತ್ರ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಜಾಬ್ ತೆಗೆದಿದ್ದರಿಂದ ಮುಜುಗರ ಅನುಭವಿಸಿದ್ದ ಆಯುಷ್‌ ವೈದ್ಯೆ ನುಸ್ರತ್ ಪರ್ವೀನ್ ಅವರು ಕರ್ತವ್ಯಕ್ಕೆ ಬುಧವಾರ ವರದಿ ಮಾಡಿಕೊಂಡಿದ್ದಾರೆ. 

‘ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬುಧವಾರ ಕೊನೆಯ ದಿನವಾಗಿತ್ತು. ಈ ದಿನವೇ ನುಸ್ರತ್‌ ಕರ್ತವ್ಯಕ್ಕೆ ಸೇರಿದ್ದಾರೆ’ ಎಂದು ಸರ್ಕಾರಿ ತಿಬ್ಬಿ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಮಹಫೂಜುರ್ ರಹಮಾನ್‌ ತಿಳಿಸಿದ್ದಾರೆ. 

ಡಿಸೆಂಬರ್ 15ರಂದು ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮ ನಡೆದಿತ್ತು. ವೈದ್ಯೆ ನುಸ್ರತ್‌ ಪರ್ವೀನ್‌ ಅವರು ಮುಖವನ್ನು ಮರೆಮಾಚುವ ರೀತಿಯಲ್ಲಿ ಹಿಜಾಬ್‌ ಧರಿಸಿ ಬಂದಿದ್ದರು. ಅವರಿಗೆ ನೇಮಕಾತಿ ಪತ್ರ ನೀಡುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಖದ ಮೇಲಿನ ಬಟ್ಟೆಯನ್ನು ಏಕಾಏಕಿ ಹಿಡಿದೆಳೆದಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತಲ್ಲದೇ, ಭಾರಿ ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.