ADVERTISEMENT

ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 7ಕ್ಕೆ

ಪಿಟಿಐ
Published 25 ಫೆಬ್ರುವರಿ 2020, 5:46 IST
Last Updated 25 ಫೆಬ್ರುವರಿ 2020, 5:46 IST
ದೆಹಲಿಯಲ್ಲಿ ಸೋಮವಾರ ಪೌರತ್ವ ಕಾಯ್ದೆ ಪರ–ವಿರೋಧಿ ಬಣಗಳ ಘರ್ಷಣೆ (ರಾಯಿಟರ್ಸ್‌ ಚಿತ್ರ).
ದೆಹಲಿಯಲ್ಲಿ ಸೋಮವಾರ ಪೌರತ್ವ ಕಾಯ್ದೆ ಪರ–ವಿರೋಧಿ ಬಣಗಳ ಘರ್ಷಣೆ (ರಾಯಿಟರ್ಸ್‌ ಚಿತ್ರ).   

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ದೃಢಪಡಿಸಿದರು.

ಪೌರತ್ವ ಕಾಯ್ದೆಯ ಪರ–ವಿರೋಧ ಹೋರಾಟಗಾರರ ನಡುವೆ ಸಂಭವಿಸಿದ ಹಿಂಸಾಚಾರದಲ್ಲಿ ಮೃತಪಟ್ಟವರ ಪೈಕಿದೆಹಲಿ ಪೊಲೀಸ್‌ ಇಲಾಖೆಯ ಹೆಡ್‌ ಕಾನ್‌ಸ್ಟೆಬಲ್ ರತನ್‌ ಲಾಲ್ ಸಹ ಸೇರಿದ್ದಾರೆ.

ಸೋಮವಾರ ರಾತ್ರಿಯವರೆಗೆ ಅಧಿಕಾರಿಗಳು ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ಮಂಗಳವಾರ ಮುಂಜಾನೆ ಸತ್ತವರ ಸಂಖ್ಯೆ 7ಕ್ಕೆ ಏರಿದೆ ಎಂದು ದೃಢಪಡಿಸಿದರು.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.