ADVERTISEMENT

ಒಡಿಶಾದಲ್ಲಿ ಗುಂಪು ಘರ್ಷಣೆ | ನಿಷೇಧಾಜ್ಞೆ ಜಾರಿ; ಬಂದ್‌ಗೆ ಕರೆ ನೀಡಿದ VHP

ಪಿಟಿಐ
Published 6 ಅಕ್ಟೋಬರ್ 2025, 4:23 IST
Last Updated 6 ಅಕ್ಟೋಬರ್ 2025, 4:23 IST
<div class="paragraphs"><p>ಒಡಿಶಾ ಗುಂಪು ಘರ್ಷಣೆ</p></div>

ಒಡಿಶಾ ಗುಂಪು ಘರ್ಷಣೆ

   

ಪಿಟಿಐ ಚಿತ್ರ

ಕಟಕ್‌/ಭುವನೇಶ್ವರ: ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗುಂಪು ಘರ್ಷಣೆ ನಡೆದ ಕಾರಣ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಒಡಿಶಾದ ಕಟಕ್‌ನ 13 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ADVERTISEMENT

ಇಂಟರ್‌ನೆಟ್‌ ಸಂಪರ್ಕ ಸ್ಥಗಿತಗೊಳಿಸಲಾಗಿದ್ದು, ಭದ್ರತೆ ಬಿಗಿ ಮಾಡಲಾಗಿದೆ.

ಈ ನಡುವೆ, ಮೆರವಣಿಗೆಯ ಸಮಯದಲ್ಲಿ ನಡೆದ ಗುಂಪು ಘರ್ಷಣೆಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಇಂದು ನಗರದಲ್ಲಿ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ.

ಭಾನುವಾರ ನಡೆದ ಹಿಂಸಾಚಾರದಲ್ಲಿ 25 ಜನರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಶನಿವಾರ ಬೆಳಗಿನ ಜಾವ 2 ಗಂಟೆಯ ಹೊತ್ತಿಗೆ ದರ್ಗಾ ಬಜಾರ್ ಪ್ರದೇಶದ ಕಥಜೋಡಿ ನದಿಯ ದಡದ ಕಡೆಗೆ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದಾಗ ಘರ್ಷಣೆ ನಡೆದಿದೆ.

ಸದ್ಯ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿರಿಸಿದ್ದು, ನಕಲಿ ವಿಡಿಯೊಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.