ADVERTISEMENT

ಗಂಗಾಗೆ ಕಲುಷಿತ ನೀರು ಉತ್ತರ ಪ್ರದೇಶದ ಜಲನಿಗಮಕ್ಕೆ ಎನ್‌ಜಿಟಿ ತರಾಟೆ

ಪಿಟಿಐ
Published 2 ಆಗಸ್ಟ್ 2020, 12:48 IST
Last Updated 2 ಆಗಸ್ಟ್ 2020, 12:48 IST
ಗಂಗಾ ನದಿ ಸ್ವಚ್ಛತೆ
ಗಂಗಾ ನದಿ ಸ್ವಚ್ಛತೆ    

ನವದೆಹಲಿ: ಗಂಗಾ ನದಿಗೆ ಕಲುಷಿತ ನೀರು ಸೇರುವುದನ್ನು ತಪ್ಪಿಸಲು ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ನರೋನಾ ಪಟ್ಟಣದಲ್ಲಿ ತ್ವರಿತಗತಿಯಲ್ಲಿ ಮನೆಗಳಿಗೆ ಒಳಚರಂಡಿ ಸೌಲಭ್ಯ ಕಲ್ಪಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್.ಜಿ.ಟಿ) ರಾಜ್ಯದ ಜಲನಿಗಮಕ್ಕೆ ನಿರ್ದೇಶಿಸಿದೆ.

ನರೋನಾದಲ್ಲಿ ಒಳಚರಂಡಿ ನೀರು ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿಜಲನಿಗಮದ ಕಾರ್ಯವೈಖರಿಯನ್ನು ನ್ಯಾಯಮಂಡಳಿಯು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

`ಉತ್ತಮ ಪ್ರದೇಶದ ಜಲನಿಗಮ ತನ್ನ ಜವಾಬ್ದಾರಿಯನ್ನು ನಿಬಾಯಿಸಬೇಕು. ಇದು ಗುತ್ತಿಗೆದಾರರ ಲೋಪ ಎಂಬ ಕಾರಣವನ್ನು ಪರಿಗಣಿಸಲಾಗದು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಇದನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಲ್ವಿಚಾರಣೆ ನಡೆಸಬೇಕು' ಎಂದು ಆದೇಶಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.