ADVERTISEMENT

ಪಂಜಾಬ್ | ರೈತ ನಾಯಕರ ಬಂಧನ; ಶಂಭು–ಖನೌರಿ ಗಡಿಯಲ್ಲಿ ಪ್ರತಿಭಟನಾ ಸ್ಥಳ ತೆರವು

ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ ಮುಗಿಸಿ ಬರುತ್ತಿರುವ ವೇಳೆ ಬಂಧನ

ಪಿಟಿಐ
Published 20 ಮಾರ್ಚ್ 2025, 2:51 IST
Last Updated 20 ಮಾರ್ಚ್ 2025, 2:51 IST
<div class="paragraphs"><p> ಪ್ರತಿಭಟನಾ ಸ್ಥಳ ತೆರವುಗೊಳಿಸುತ್ತಿರುವ ದೃಶ್ಯ</p></div>

ಪ್ರತಿಭಟನಾ ಸ್ಥಳ ತೆರವುಗೊಳಿಸುತ್ತಿರುವ ದೃಶ್ಯ

   

ಚಿತ್ರ: X/bjp4growth

ಚಂಡೀಗಢ(ಪಂಜಾಬ್): ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವಾಣ್‌ ನೇತೃತ್ವದ ನಿಯೋಗದೊಂದಿಗೆ ಸಭೆ ಮುಗಿಸಿ ಶಂಭು ಗಡಿ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ರೈತ ನಾಯಕರನ್ನು ಬುಧವಾರ ಸಂಜೆ ಮೊಹಾಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಂಧಿತ ನಾಯಕರಲ್ಲಿ ಸರ್ವಾನ್‌ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೇವಾಲ್‌ ಸೇರಿದ್ದಾರೆ.

ಬುಧವಾರ ತಡರಾತ್ರಿ ಶಂಭು ಮತ್ತು ಖನೌರಿ ಗಡಿಯಲ್ಲಿ ಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಿರುವ ಪೊಲೀಸರು ಅಲ್ಲಿಂದ ತೆರಳುವಂತೆ ರೈತರಿಗೆ ಹೇಳಿದ್ದಾರೆ. ಅಲ್ಲದೇ ಸ್ಥಳದಲ್ಲಿ ರೈತರು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ವೇದಿಕೆಗಳನ್ನು ಕೆಡವಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ಇತರ ವಾಹನಗಳನ್ನೂ ತೆರವುಗೊಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತ ನಾಯಕರ ‘ದೆಹಲಿ ಚಲೋ’ ಬೃಹತ್ ಚಳವಳಿಯನ್ನು ಪೊಲೀಸರು ತಡೆದಿದ್ದರಿಂದ ಕಳೆದ ವರ್ಷ ಫೆಬ್ರುವರಿ 13ರಿಂದ ರೈತರು ಶಂಭು ಮತ್ತು ಖನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಏತನ್ಮಧ್ಯೆ, ಮೇ 4ರಂದು ರೈತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡಸುವುದಾಗಿ ಶಿವರಾಜ್ ಸಿಂಗ್ ಚವಾಣ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.