ADVERTISEMENT

ನಾವು ಕಂಗನಾ ರನೌತ್‌ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದೇವೆ: ಸಂಜಯ್‌ ರಾವುತ್‌

ಏಜೆನ್ಸೀಸ್
Published 13 ಸೆಪ್ಟೆಂಬರ್ 2020, 13:50 IST
Last Updated 13 ಸೆಪ್ಟೆಂಬರ್ 2020, 13:50 IST
ನಟಿ ಕಂಗನಾ ರನೌತ್ ಹಾಗೂ ಸಂಜಯ್ ರಾವುತ್
ನಟಿ ಕಂಗನಾ ರನೌತ್ ಹಾಗೂ ಸಂಜಯ್ ರಾವುತ್   

ಮುಂಬೈ: ನಟಿ ಕಂಗನಾ ರನೌತ್‌ ಅವರ ಬಗ್ಗೆ ಮಾತನಾಡುವುದನ್ನುನಾವು ನಿಲ್ಲಿಸಿದ್ದೇವೆ ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ತಿಳಿಸಿದ್ದಾರೆ.

ಕಂಗನಾ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳುಹಾಗೂ ಎಲ್ಲರ ಪ್ರತಿಕ್ರಿಯೆಗಳನ್ನು ನಾವು ಗಮನಿಸುತ್ತಿದ್ದೇವೆ. ಅವರ (ಕಂಗನಾ) ಹಿಂದಿರುವುದು ಯಾವ ರಾಜಕೀಯ ಪಕ್ಷ ಮತ್ತು ಯಾವ ವ್ಯಕ್ತಿ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ನೌಕಾಪಡೆಯ ನಿವೃತ್ತ ಅಧಿಕಾರಿಯ ಮೇಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದು, ‘ಮಹಾರಾಷ್ಟ್ರ ದೊಡ್ಡ ರಾಜ್ಯವಾಗಿದೆ. ಇಲ್ಲಿ ಕಾನೂನನ್ನು ಯಾವಾಗಲೂ ಗೌರವಿಸಲಾಗುತ್ತದೆ. ಯಾವುದೇ ಮುಗ್ಧ ವ್ಯಕ್ತಿಯ ಮೇಲೆ ಹಲ್ಲೆ ಮಾಡಬಾರದು. ಇದು ಸರ್ಕಾರದ ನಂಬಿಕೆಯಾಗಿದೆ’ ಎಂದಿದ್ದಾರೆ.

ADVERTISEMENT

‘ಮುಂಬರುವ ಸಂಸತ್‌ ಅಧಿವೇಶನದಲ್ಲಿ ಇಂಡೋ–ಚೀನಾ ಗಡಿ ಸಮಸ್ಯೆ, ಜಿಎಸ್‌ಟಿ, ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚಿಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.