ADVERTISEMENT

ಶೀಘ್ರದಲ್ಲೇ ಲಸಿಕೆ ಪಡೆಯುತ್ತೇನೆ: ರಾಮ್‌ದೇವ್

ಪಿಟಿಐ
Published 10 ಜೂನ್ 2021, 18:55 IST
Last Updated 10 ಜೂನ್ 2021, 18:55 IST
ರಾಮ್‌ದೇವ್‌
ರಾಮ್‌ದೇವ್‌   

ಡೆಹ್ರಾಡೂನ್: ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ತನಗೆ ಕೋವಿಡ್‌ ಲಸಿಕೆ ಅಗತ್ಯವಿಲ್ಲ ಎಂದು ಹೇಳಿದ್ದ ಯೋಗ ಗುರು ರಾಮ್‌ದೇವ್‌ ಅವರು ಇದೀಗ ಮನಸ್ಸು ಬದಲಿಸಿದ್ದು, ಶೀಘ್ರದಲ್ಲಿಯೇ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ ವೈದ್ಯರನ್ನು ‘‘ಭೂಮಿಯ ಮೇಲಿನ ‘ದೇವರ’ ದೂತರು’’ ಎಂದು ಕರೆದಿದ್ದಾರೆ.

ಜೂನ್ 21 ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ಸ್ವಾಗತಿಸಿದ ರಾಮ್‌ದೇವ್ ಅವರು, ಇದನ್ನು ‘ಐತಿಹಾಸಿಕ" ಹೆಜ್ಜೆ’ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT