ADVERTISEMENT

ಹಕ್ಕಿ ಜ್ವರ ಭೀತಿ: ಜ.26ರವರೆಗೆ ಕೆಂಪುಕೋಟೆ ಪ್ರವೇಶ ನಿಷೇಧ

ಪಿಟಿಐ
Published 19 ಜನವರಿ 2021, 11:08 IST
Last Updated 19 ಜನವರಿ 2021, 11:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ‌: ಇಲ್ಲಿನ ಐತಿಹಾಸಿಕ ಕೆಂಪುಕೋಟೆ ಸಮೀಪದಲ್ಲಿ ಸತ್ತು ಬಿದ್ದಿದ್ದ ಕಾಗೆ ಮಾದರಿಯಲ್ಲಿ ‘ಹಕ್ಕಿ ಜ್ವರ‘ ಸೋಂಕು ದೃಢಪಟ್ಟ ಕಾರಣ, ಜನವರಿ 26ರವರಗೆ ಈ ಸ್ಮಾರಕಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೆಂಪು ಕೋಟೆಯ ಸಮೀಪದಲ್ಲಿ 15 ಕಾಗೆಗಳು ಸತ್ತುಬಿದ್ದಿದ್ದವು. ಅವುಗಳ ಮಾದರಿಯನ್ನು ಜಲಂಧರ್ ಮೂಲದ ಪ್ರಯೋಗಾಲಯಕ್ಕೆ ಕಳಹಿಸಲಾಗಿತ್ತು ಎಂದು ದೆಹಲಿಯ ಪಶುವೈದ್ಯಕೀಯ ವಿಭಾಗದ ನಿರ್ದೇಶಕ ರಾಕೇಶ್ ಸಿಂಗ್ ತಿಳಿಸಿದ್ದಾರೆ.

ಸತ್ತೆ ಕಾಗೆ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ದೃಢಪಟ್ಟ ಕಾರಣ, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ADVERTISEMENT

ಶನಿವಾರದಂದು ದೆಹಲಿಯ ಮೃಗಾಲಯದಲ್ಲಿ ಸತ್ತ ಗೂಬೆಯ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ತಗಲಿರುವುದು ದೃಢಪಟ್ಟಿತ್ತು. ಕಳೆದ ವಾರ ದೆಹಲಿಯ ಉದ್ಯಾನಗಳಲ್ಲಿನ ಬಾತುಕೋಳಿ, ಕಾಗೆಗಳ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾದ ಕಾರಣ, ಪಶ್ಚಿಮ ದೆಹಲಿಯಲ್ಲಿರುವ ಗಾಜಿಪುರದ ಕೋಳಿ ಮಾರುಕಟ್ಟೆಯಿಂದ ಹತ್ತು ದಿನಗಳ ಕಾಲ ಸಂಸ್ಕರಿಸಿದ ಚಿಕನ್‌ ಖರೀದಿಸಿ ತರುವುದನ್ನು ನಿಷೇಧಿಸಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.