ADVERTISEMENT

ತಮಿಳುನಾಡು: ಸೆಂಥಿಲ್‌ ಬಾಲಾಜಿ ಬಂಧನ ಅವಧಿ ಏ.22ರವರೆಗೆ ವಿಸ್ತರಣೆ

ಪಿಟಿಐ
Published 17 ಏಪ್ರಿಲ್ 2024, 13:27 IST
Last Updated 17 ಏಪ್ರಿಲ್ 2024, 13:27 IST
ಸೆಂಥಿಲ್‌ ಬಾಲಾಜಿ 
ಸೆಂಥಿಲ್‌ ಬಾಲಾಜಿ    

ಚೆನ್ನೈ: ಡಿಎಂಕೆ ನಾಯಕ, ತಮಿಳುನಾಡಿನ ಮಾಜಿ ಸಚಿವ ಸೆಂಥಿಲ್‌ ಬಾಲಾಜಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನಗರದ ನ್ಯಾಯಾಲಯವು ಬುಧವಾರ ಇದೇ 22ರವರೆಗೆ ವಿಸ್ತರಿಸಿದೆ. 

ಜೈಲಿನಲ್ಲಿರುವ ಸೆಂಥಿಲ್‌ ಬಾಲಾಜಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದರು. ತಮ್ಮನ್ನು ಬಿಡುಗಡೆಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ವಾದವನ್ನು ಮರು ಆಲಿಸುವಂತೆ ಸೆಂಥಿಲ್‌ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರದ ಒಳಗೆ ಸೆಂಥಿಲ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು. 

ಹಿಂದೆ ಸಾರಿಗೆ ಸಚಿವರಾಗಿದ್ದ ವೇಳೆ ಸೆಂಥಿಲ್‌ ಅವರು ಉದ್ಯೋಗ ನೀಡಲು ಲಂಚ ಪಡೆದ, ಹಣದ ಅಕ್ರಮ ವರ್ಗಾವಣೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ ಅವರನ್ನು ಕಳೆದ ವರ್ಷದ ಜೂನ್‌ನಲ್ಲಿ ಬಂಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.