ADVERTISEMENT

ಅಜಿತ್‌ ಡಿಸಿಎಂ: ಪ್ರತಿಕ್ರಿಯಿಸದ ಪವಾರ್‌

ಪಿಟಿಐ
Published 21 ಡಿಸೆಂಬರ್ 2019, 19:56 IST
Last Updated 21 ಡಿಸೆಂಬರ್ 2019, 19:56 IST
ಶರದ್‌ ಪವಾರ್
ಶರದ್‌ ಪವಾರ್    

ಪುಣೆ: ಸೋದರ ಸಂಬಂಧಿಯೂ ಆದ ಹಿರಿಯ ಮುಖಂಡ ಅಜಿತ್ ಪವಾರ್ ಅವರನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮಾಡುವ ಕುರಿತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತಾರೆ ಎಂದಷ್ಟೇ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈತ್ರಿ ಸರ್ಕಾರದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್‌ ಹೇಳಿದ್ದರು. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಲು ಎನ್‌ಸಿಪಿ ನಿರಾಕರಿಸಿದೆ.

ADVERTISEMENT

’ರಾವುತ್‌ ಅವರ ಹೇಳಿಕೆ ಓದಿದ್ದೇನೆ. ನಾನು ಎನ್‌ಸಿಪಿ ಮುಖ್ಯಸ್ಥ. ಯಾರು ಸಂಪುಟ ಸೇರುತ್ತಾರೆ ಎಂಬುದು ನನಗೆ ಗೊತ್ತಿರುತ್ತದೆ‘ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ನೀರಾವರಿ ಹಗರಣದಲ್ಲಿ ಅಜಿತ್‌ ಪವಾರ್‌ಗೆಎಸಿಬಿ ಕ್ಲೀನ್‌ಚಿಟ್ ನೀಡಿರುವ ಬೆನ್ನಲ್ಲೇ ಈ ಹೇಳಿಕೆಗಳು ಹೊರಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.