ADVERTISEMENT

ಮಾತೋಶ್ರೀ ಇರುವಲ್ಲಿಯೇ ಶಿವಸೇನೆಗೆ ಸೋಲು: ಕಾಂಗ್ರೆಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 9:20 IST
Last Updated 24 ಅಕ್ಟೋಬರ್ 2019, 9:20 IST
   

ಮುಂಬೈ: ಮುಂಬೈ ಹೊರ ವಲಯದಲ್ಲಿರುವಠಾಕ್ರೆ ಕುಟುಂಬದ ಬಂಗಲೆ ಇರುವ ಬಾಂದ್ರ ಪೂರ್ವ ವಿಧಾನಸಭೆ ಕ್ಷೇತ್ರದಲ್ಲೇಶಿವಸೇನೆಯ ಅಭ್ಯರ್ಥಿ ಸೋಲುಂಡಿದ್ದಾರೆ. ಅಲ್ಲಿ ಕಾಂಗ್ರೆಸ್‌ ಗೆದ್ದಿದೆ.

ಶಿವ ಸೇನೆಯಿಂದ ಮುಂಬೈನ ಮೇಯರ್‌ ಪ್ರೊ. ವಿಶ್ವನಾಥ್‌ ಮಹದೇಶ್ವರ್‌ ಅವರು ಬಾಂದ್ರಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ವಿಶ್ವನಾಥ್‌ ವಿರುದ್ಧ ಕಾಂಗ್ರೆಸ್‌ನ ಜೀಷನ್‌ ಬಾಬಾಸಿದ್ದಿಖಿಗೆಲುವು ಸಾಧಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಜೀಷನ್‌ ಸಿದ್ದಿಖಿ, ಶಿವ ಸೇನೆಯ ಬಂಡಾಯ ಅಭ್ಯರ್ಥಿ, ಹಾಲಿ ಶಾಸಕರಾಗಿದ್ದ ತೃಪ್ತಿ ಸಾವಂತ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.