ADVERTISEMENT

ಕಲ್ಲೆಸೆತ: ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ಪಡೆಯ ಕಾರುಗಳು ಪುಡಿ ಪುಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2022, 15:39 IST
Last Updated 21 ಆಗಸ್ಟ್ 2022, 15:39 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ದುಷ್ಕರ್ಮಿಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಯ ಕಾರುಗಳ ಮೇಲೆ ಕಲ್ಲೆಸಿದಿರುವ ಘಟನೆ ಭಾನುವಾರ ನಡೆದಿದೆ.

ಕಲ್ಲೆಸೆತದ ಪರಿಣಾಮ ಬೆಂಗಾವಲು ಪಡೆಯ ಹಲವು ಕಾರುಗಳ ಗ್ಲಾಸುಗಳು ಪುಡಿಪುಡಿಯಾಗಿವೆ. ಘಟನೆ ನಡೆದ ವೇಳೆ ಬೆಂಗಾವಲು ಪಡೆಯ ಜೊತೆನಿತೀಶ್ ಕುಮಾರ್ ಅವರು ಇರಲಿಲ್ಲ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಪಟ್ನಾ ಜಿಲ್ಲೆಯ ಸೊಹಗಿ ಎಂಬಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತರು ಕೃತ್ಯ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಲ್ಲೆಸೆತಕ್ಕೆ ಕಾರಣ ತಿಳಿದು ಬಂದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.