ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆಶುಭ ಕೋರಿ ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲ್ದೀಪ್ ಸೆಂಗಾರ್ ಅವರ ಚಿತ್ರವಿರುವ ಜಾಹೀರಾತು ಉನ್ನಾವ್ನ ಸ್ಥಳೀಯಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯೋಗಿ ಆದಿತ್ಯನಾಥರ ಚಿತ್ರದ ಜತೆಕುಲದೀಪ್ ಸೆಂಗಾರ್ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾಬಂಧನದ ಶುಭಾಶಯ ಹೇಳಿರುವ ಜಾಹೀರಾತು ಇದಾಗಿದೆ.
ಈಜಾಹೀರಾತಿಗಾಗಿ ಉನ್ನಾವ್ ಪ್ರದೇಶದ ಉಗೊ ಪಂಚಾಯತ್ ಅಧ್ಯಕ್ಷ ಹಣ ನೀಡಿದ್ದರುಎಂದು ಎನ್ಡಿಟಿವಿ ವರದಿ ಮಾಡಿದೆ. ಈ ಜಾಹೀರಾತಿನಲ್ಲಿ ಸೆಂಗಾರ್ ಅವರ ಪತ್ನಿಯ ಫೋಟೊ ಕೂಡಾ ಇದೆ.
ಆದಾಗ್ಯೂ, ಉಗೊ ಪಂಚಾಯತ್ ಅಧ್ಯಕ್ಷರಿಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟು ಇಲ್ಲ ಎಂದು ವಕೀಲ ಅನುಜ್ ಕುಮಾರ್ ದೀಕ್ಷಿತ್ ಹೇಳಿದ್ದಾರೆ.
ಕುಲ್ದೀಪ್ ಸಿಂಗ್ ಅವರು ನಮ್ಮ ಪ್ರದೇಶದ ಶಾಸಕರಾಗಿರುವುದರಿಂದ ಅವರ ಫೋಟೊ ಜಾಹೀರಾತಿನಲ್ಲಿದೆ.ಆ ಜಾಹೀರಾತಿನಲ್ಲಿಯಾವುದೇ ಪಕ್ಷವನ್ನು ಉಲ್ಲೇಖಿಸಿಲ್ಲ.ಅವರು ನಮ್ಮ ಶಾಸಕರಾಗಿರುವುದರಿಂದ ನಾವು ಅವರ ಫೋಟೊ ಬಳಸಿದ್ದೇವೆ ಎಂದು ಪಂಚಾಯತ್ ಅಧ್ಯಕ್ಷರ ಪರವಾಗಿ ದೀಕ್ಷಿತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.