ADVERTISEMENT

ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ ಆರ್‌. ವೇಣುಗೋಪಾಲ್‌ ನಿಧನ

ಪಿಟಿಐ
Published 11 ಜೂನ್ 2020, 11:53 IST
Last Updated 11 ಜೂನ್ 2020, 11:53 IST

ಕೊಚ್ಚಿ: ಹಿರಿಯ ಆರ್‌ಎಸ್‌ಎಸ್‌ ಪ್ರಚಾರಕ ಮತ್ತು ಭಾರತೀಯ ಮಜೂದೂರ್‌ ಸಂಘ(ಬಿಎಂಎಸ್‌)ದಮಾಜಿ ಅಧ್ಯಕ್ಷ ಆರ್‌. ವೇಣುಗೋಪಾಲ್(96)‌ ಅವರುಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಕೊನೆ ಉಸಿರೆಳೆದರು.

ಇವರುವೃದ್ಧಾಪ್ಯ ಸಂಬಂಧಿ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರ್‌ಎಸ್‌ಎಸ್‌ ಮೂಲಗಳು ತಿಳಿಸಿವೆ.

ವೇಣುಗೋಪಾಲ್‌ ಅವರು 1946 ರಲ್ಲಿ ಆರ್‌ಎಸ್‌ಎಸ್‌ ಪ್ರಚರಾಕನಾಗಿ ಕಾರ್ಯನಿರ್ವಹಿಸಿದರು. ಭಾರತೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್‌)ದ ಪ್ರಮುಖ ಸಂಸ್ಥೆಗಳಾದ ಬಿಎಂಎಸ್‌, ಸಹಕಾರ ಭಾರತಿ ಮತ್ತು ಕೇಸರಿನಿಯತಕಾಲಿಕೆ ಅಭಿವೃದ್ಧಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ 1967ರಲ್ಲಿಭಾರತೀಯ ಮಜೂದೂರ್‌ ಸಂಘದ ಅಧ್ಯಕ್ಷರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.