ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೆಂಕಟಾಪುರದಲ್ಲಿರುವ ಎಲ್ಜಿ ಪಾಲಿಮರ್ಸ್ ಎಂಬ ಕಾರ್ಖಾನೆಯಲ್ಲಿ ಇಂದು ಮುಂಜಾನೆ ವಿಷಾನಿಲಸೋರಿಕೆಯಾಗಿದೆ. ಕ್ಷಣಾರ್ಧದಲ್ಲಿ ಅನಿಲವು ಸುತ್ತಲ ಪ್ರದೇಶ ವ್ಯಾಪಿಸಿದ್ದು ಈ ವರೆಗೆ 7 ಮಂದಿ ಮೃತಪಟ್ಟಿದ್ದಾರೆ.800ಕ್ಕೂ ಅಧಿಕಮಂದಿ ಅಸ್ವಸ್ಥಗೊಂಡಿದ್ದು ಎಲ್ಲರನ್ನು ಅಲ್ಲಿನ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆಯಿಂದಾಗಿ ಜನ ಬೀದಿ ಬೀದಿಗಳಲ್ಲಿ ಕುಸಿದು ಬೀಳುತ್ತಿದ್ದ, ಅಸ್ವಸ್ಥರನ್ನು ಹೊತ್ತು ಆಸ್ಪತ್ರೆಗೆ ಓಡುತ್ತಿದ್ದ ದೃಶ್ಯಗಳು ಅಲ್ಲಿ ಸಾಮಾನ್ಯ ಎಂಬಂತೆ ಕಂಡಿವೆ. ವಿಶಾಖಪಟ್ಟಣದ ಈ ದುರಂತ ಭೋಪಾಲದ ಅನಿಲ ದುರಂತವನ್ನು ನೆನಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.