ADVERTISEMENT

ಮುದ್ರೆ ಇರುವವರು ಸಾರ್ವಜನಿಕವಾಗಿ ಕಂಡರೆ ತಿಳಿಸಿ: ಭಾಸ್ಕರ್‌ ರಾವ್‌ ಟ್ವೀಟ್‌ 

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 5:07 IST
Last Updated 23 ಮಾರ್ಚ್ 2020, 5:07 IST
   

ಬೆಂಗಳೂರು: ಹೋಮ್‌ ಕ್ವಾರಂಟೈನ್‌ಗೆ (ನಿವಾಸದಲ್ಲೇ ಪ್ರತ್ಯೇಕವಾಸ) ಸೂಚಿಸಿ ಕೈ ಮೇಲೆ ಮುದ್ರೆ ಹಾಕಲಾಗಿರುವ ವ್ಯಕ್ತಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌, ಅಂಥವರು ಕಂಡರೆ ಪೊಲೀಸರಿಗೆ ತಿಳಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘5000 ಮಂದಿಗೆ ಹೋಮ್‌ ಕ್ವಾರಂಟೈನ್‌ಗೆ ಸೂಚಿಸಿ, ಅವರ ಕೈಗಳ ಮೇಲೆ ಮುದ್ರೆ ಹಾಕಲಾಗಿದೆ. ಸಾರ್ವಜನಿಕರ ಹಿತದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿರುವ ವ್ಯಕ್ತಿಗಳು ಬಿಎಂಟಿಸಿ ಬಸ್‌ಗಳಲ್ಲಿ ಓಡಾಡುತ್ತಿರುವುದು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತಿರುವ ಬಗ್ಗೆ ನಮಗೆ ಕರೆಗಳು ಬಂದಿವೆ. ಇಂಥವರು ಕಂಡರೆ ಸಹಾಯವಾಣಿ 100 ಕರೆ ಮಾಡಿ,’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಾಹಿತಿ ನೀಡಿದರೆ, ಅಂಥವರನ್ನು ಬಂಧಿಸಿ ಸರ್ಕಾರಿ ಕ್ವಾರಂಟೀನ್‌ಗಳಲ್ಲಿ ಇರಿಸುವುದಾಗಿಯೂ ಭಾಸ್ಕರ್‌ ರಾವ್‌ ಅವರು ಎಚ್ಚರಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 269ರ ಅಡಿಯಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಭಾಸ್ಕರ್‌ ರಾವ್‌ ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.