ADVERTISEMENT

ಅಬಕಾರಿ ಬೇಡ, ಬಡವರ ಪರ ಕೆಲಸ ಮಾಡುವ ಖಾತೆ ಬೇಕು– ಎಂಟಿಬಿ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 11:18 IST
Last Updated 4 ಆಗಸ್ಟ್ 2021, 11:18 IST
ಎಂಟಿಬಿ ನಾಗರಾಜ್‌
ಎಂಟಿಬಿ ನಾಗರಾಜ್‌    

ಬೆಂಗಳೂರು: ‘ಇಂಥದ್ದೇ ಖಾತೆ ಬೇಕು ಎಂದು ಹೇಳಲ್ಲ, ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಆದರೆ, ಅಬಕಾರಿ ಬೇಡ, ಬಡವರ ಪರವಾಗಿ ಕೆಲಸ ಮಾಡಲು ಅವಕಾಶ ಇರುವ ಖಾತೆ ಬಯಸುತ್ತೇನೆ’ ಎಂದು ನೂತನ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು.

ನೂತನ ಸಚಿವರಾಗಿ ‍ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಕ್ಷ ವಿಶ್ವಾಸ ಇಟ್ಟು, ನಂಬಿಕೆ ಇಟ್ಟು ನನ್ನನ್ನು ಎರಡನೇ ಬಾರಿಗೆ ಸಚಿವನಾಗಿ ಮಾಡಿದೆ. ಜನಪರ ಆಡಳಿತ ನೀಡಲು ಪ್ರಯತ್ನ ಮಾಡುತ್ತೇನೆ’ ಎಂದರು.

‘ಇರುವುದರಲ್ಲಿ ಶೇ 70, 80ರಷ್ಟು ವಾಸ್ತು ಇರುವ ಕೊಠಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.