ಶಿರಸಿ: ಶಿವರಾಮ ಹೆಬ್ಬಾರಂತೆ 17 ಜನ ಶಾಸಕರು ರಾಜೀನಾಮೆ ನೀಡದಿದ್ದರೇ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿವರಾಮ ಹೆಬ್ಬಾರ್ ಪರ ಪ್ರಚಾರಕ್ಕೆ ತಾಲ್ಲೂಕಿನ ಬನವಾಸಿಗೆ ಬಂದಿರುವ ಅವರು ಪ್ರಚಾರ ಸಭೆಯ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದಿನ ಸರ್ಕಾರ ಆಡಳಿತ ವೈಖರಿಯಿಂದ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದರು.ಶಿವರಾಮ ಹೆಬ್ಬಾರ್ ಗೆದ್ದ ಮೇಲೆ ಮುಂದೆ ಸಚಿವರಾಗಲಿದ್ದಾರೆ ಎಂದರು.
ಇದನ್ನೂ ಓದಿ:ಅನರ್ಹ ಶಾಸಕರ ರಾಜೀನಾಮೆ ಚರ್ಚೆ ಅನವಶ್ಯಕ: ಬಿಎಸ್ವೈ
ಸಿದ್ದರಾಮಯ್ಯ ಅವರಿಗೆ ಸೋಲು ಅನ್ನೋದು ಈಗಲೇ ಸ್ಪಷ್ಟವಾಗಿದೆ.ಮಾಜಿ ಸಿಎಂ ಆಗಿ, ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಈ ರೀತಿ ಮಾತನಾಡಿರೋದು ಶೋಭೆ ತರುವುದಿಲ್ಲ.ಅವರಿಗೆ ಚುನಾವಣೆಯಲ್ಲಿ ಮತದಾರರು ಉತ್ತರ ನೀಡಲಿದ್ದಾರೆ ಎಂದು ಕಪ್ಪು ಹಣದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.ಏನಾದರೂ ಆರೋಪ ಮಾಡುವುದಾದರೇ ಆಧಾರ ಇಟ್ಟು ಮಾತನಾಡಲಿ ಎಂದು ಸವಾಲು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.