ಬೆಂಗಳೂರು: ರೈಲಿನಲ್ಲಿ ಭುವನೇಶ್ವರದಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ಒಡಿಶಾದ ತಾಪನ್ ಕುಮಾರ್ (29) ಎಂಬ ಆರೋಪಿ ಬಂಧಿಸಿ, ₹ 80 ಲಕ್ಷ ಮೌಲ್ಯದ ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
8 ಬ್ಯಾಗ್ಗಳಲ್ಲಿ 80.67 ಕೆ.ಜಿ ತೂಕದಷ್ಟು ಗಾಂಜಾವನ್ನು ಪೆಡ್ಲರ್ಗಳಿಗೆ ಪೂರೈಸಲು ಹೊರರಾಜ್ಯದಿಂದ ತರುತ್ತಿದ್ದ. ಬ್ಯಾಗ್ನಲ್ಲಿ ಗಾಂಜಾ ಗಿಡದ ಎಲೆಗಳು ಹಾಗೂ ಹೂವುಗಳು ಇದ್ದವು ಎಂದು ಮೂಲಗಳು ತಿಳಿಸಿವೆ.
ರೈಲು ನಿಲ್ದಾಣದಲ್ಲಿ ಅನುಮಾನಗೊಂಡು ಆರೋಪಿಯನ್ನು ವಶಕ್ಕೆ ಪಡೆದು ಬ್ಯಾಗ್ ತಪಾಸಣೆ ನಡೆಸಿದಾಗ ಗಾಂಜಾ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.