ADVERTISEMENT

ಎಸ್‌ಐಟಿ ತನಿಖೆ: ನಿಲುವು ಬದಲಾವಣೆಗೆ ಒತ್ತಡ ಹೇರುವ ಸಂಬಂಧ ಬಿಎಸ್‌ವೈ ಸಭೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 7:54 IST
Last Updated 12 ಫೆಬ್ರುವರಿ 2019, 7:54 IST
   

ಬೆಂಗಳೂರು: ಸದನದಲ್ಲಿ ನಡೆಯಲಿರುವಕಲಾಪದ ವೇಳೆಆಡಿಯೊ ಪ್ರಕರಣದ ತನಿಖೆಯನ್ನುಎಸ್‌ಐಟಿಗೆ ವಹಿಸದಂತೆ ನೋಡಿಕೊಳ್ಳುವ ಕುರಿತು ಚರ್ಚೆ ನಡೆಸಲುಡಾಲರ್ಸ್‌ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷಬಿ.ಎಸ್‌.ಯಡಿಯೂರಪ್ಪ ಸಭೆ ನಡೆಸಿದರು.

ಎಸ್‌ಐಟಿ ತನಿಖೆ ಬದಲು ಸದನ ಸಮಿತಿ ಇಲ್ಲವೇ ನ್ಯಾಯಾಂಗ ತನಿಖೆಗೆ ಒತ್ತಾಯಿಸುವ ಸಂಬಂಧ ಆಪ್ತರೊಂದಿಗೆ ನಡೆದಸಭೆಯಲ್ಲಿ ಚರ್ಚಿಸಲಾಗಿದೆ.

‌ಸಭೆಗೂ ಮುನ್ನ ಬಿಎಸ್‌ವೈಮನೆ ಎದುರು ಜಮಾಯಿಸಿದ್ದ ಬಿಜೆಪಿ ನಾಯಕರು, ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಿಯೊ ತಂತ್ರ ಎಣೆದಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹಾಗೂ ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.