ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಜಬ್ಬ ಅವರು ಇಂದು ರಾಷ್ಟ್ರಪತಿಗಳಿಂದ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದರು.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಅಕ್ಷರ ಸಂತನ ಕುರಿತು...
ಹರೇಕಳ ನಿವಾಸಿ ಹಾಜಬ್ಬ ನಿತ್ಯವೂ 25 ಕಿ.ಮೀ. ದೂರದ ಮಂಗಳೂರಿಗೆ ಬಂದು ತಲೆಯ ಮೇಲೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಮಾರುತ್ತಾ ಅದರಿಂದ ಗಳಿಸಿದ ಹಣದಲ್ಲಿ ಶಾಲೆ ಕಟ್ಟಿದವರು.
‘ಅಕ್ಷರಸಂತ’ ಎಂದೇ ಖ್ಯಾತಿಯಾದವರು.ಅಕ್ಷರಕಲಿಯದ ಕಾರಣದಿಂದ ವಿದೇಶಿ ಪ್ರವಾಸಿಗರಿಗೆ ಕಿತ್ತಳೆ ಹಣ್ಣು ಮಾರಲಾಗದ ಸ್ಥಿತಿಯಿಂದ ಎಚ್ಚೆತ್ತು ಭವಿಷ್ಯದ ಪೀಳಿಗೆಗಾಗಿ ಶಾಲೆ ಆರಂಭಿಸಿದರು. ಈಗ ಅದು ಸರ್ಕಾರಿ ಶಾಲೆಯಾಗಿ ಬದಲಾಗಿದೆ.
ಪ್ರಶಸ್ತಿಯ ಮಾಹಿತಿ ನೀಡಲು ಅಧಿಕಾರಿಗಳು ಕರೆ ಮಾಡಿದ ಸಮಯದಲ್ಲಿ ಹಾಜಬ್ಬ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಸಾಲಿನಲ್ಲಿ ನಿಂತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.