ಕೊಪ್ಪಳ: ನರೇಗಲ್ ಗ್ರಾಮದಗರ್ಭಿಣಿ ಲಕ್ಷ್ಮಿ ಪೂಜಾರ ಚಿಕಿತ್ಸೆಗಾಗಿ ತಮ್ಮ ತಾಯಿಯೊಂದಿಗೆಸೋಮವಾರ 6 ಕಿ.ಮೀ ನಡೆದುಕೊಂಡು ಇಲ್ಲಿಗೆ ಬಂದರು.
ನರೇಗಲ್ ಗ್ರಾಮದಿಂದ ಕೊಪ್ಪಳಕ್ಕೆ ವಾಹನ ಸೌಲಭ್ಯವಿಲ್ಲದ ಕಾರಣ ಬಿಸಿಲಿನಲ್ಲಿಯೇ ನಡೆದುಕೊಂಡು ಬಂದಿದ್ದರು. ಎತ್ತ ಕಡೆ ಹೋಗಬೇಕು ಎಂದು ತಿಳಿಯದೇ ಇಲ್ಲಿಯ ರಸ್ತೆಯೊಂದರಲ್ಲಿ ನಿಂತಿದ್ದರು.
ಅವರನ್ನು ಕಂಡ ಮಾಧ್ಯಮದವರು ತಮ್ಮ ವಾಹನದಲ್ಲಿ ಮಂಗಳಾ ಆಸ್ಪತ್ರೆಗೆ ಸೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.