ಹಾಸನ: ರಾಜ್ಯಸಭೆ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿ ಹಾಕಿರುವ ಕಾಂಗ್ರೆಸ್ ನವರು, ನಮ್ಮ ವೋಟು ಕೇಳಲ್ಲ ಎಂದಿದ್ದಾರೆ. ಬಹುಶಃ ಬಿಜೆಪಿ ವೋಟ್ ಕೇಳ್ತಾರೊ ಗೊತ್ತಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.
ಒಂದು ಕಡೆ ಕೋಮುವಾದಿಗಳನ್ನು ದೂರವಿಡಿ ಎಂದು ಹೇಳ್ತಾರೆ. ಇನ್ನೊಂದು ಕಡೆ ಜಾತ್ಯತೀತ ಪಕ್ಷಗಳ ಮತ ಬೇಡ ಎನ್ನುತ್ತಾರೆ ಎಂದ ಅವರು, ನಾವು ಸೋನಿಯಾ ಗಾಂಧಿ ಅವರನ್ನು ಕೇಳಿದ್ವಿ. ಆದರೆ, ರಾಜ್ಯದ ಕಾಂಗ್ರೆಸ್ ನಲ್ಲಿ ಮೇಡಂ ಮಾತಿಗೂ ಬೆಲೆ ಇಲ್ಲ ಎಂದರೆ ನಾವೇನು ಮಾಡುವುದು ಎಂದು ಪ್ರಶ್ನಿಸಿದರು.
ರಾಜ್ಯಸಭೆ ಚುನಾವಣೆ ಬಗ್ಗೆ ದೇವೇಗೌಡ್ರು, ಕುಮಾರಸ್ವಾಮಿ ನೋಡಿಕೊಳ್ತಾರೆ. ಬಿಜೆಪಿ, ಜೆಡಿಎಸ್ಗೆ ತಲಾ 32 ಮತಗಳಿವೆ. ನಮಗೆ ಇನ್ನೂ ಒಂದು ಮತ ಬೇಕು. ಜೂ.10 ಕ್ಕೆ ಏನಾಗುತ್ತೆ ನೋಡೋಣ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.