ADVERTISEMENT

ಮೇಕೆದಾಟು ಪಾದಯಾತ್ರೆ ತಡೆಯಲು ಪೊಲೀಸರು ಸಜ್ಜು

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 6:55 IST
Last Updated 13 ಜನವರಿ 2022, 6:55 IST
ಪೊಲೀಸ್ ಬಂದೋಬಸ್ತ್
ಪೊಲೀಸ್ ಬಂದೋಬಸ್ತ್   

ರಾಮನಗರ: ಸರ್ಕಾರದ ಆದೇಶದ ನಡುವೆಯೂ ಮೇಕೆದಾಟು ಪಾದಯಾತ್ರೆ ಮುಂದುವರಿಸಿದ್ದಲ್ಲಿ ಇಲ್ಲಿನ ಐಜೂರು ವೃತ್ತದಲ್ಲಿಯೇ ಪಾದಯಾತ್ರೆ ತಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಅಶ್ರುವಾಯು, ವಾಟರ್ ಜೆಟ್ ಸೇರಿದಂತೆ ವಿವಿಧ ಸಲಕರಣೆಗಳುಳ್ಳ ವಾಹನಗಳನ್ನು ಸಜ್ಜಾಗಿ‌ ನಿಲ್ಲಿಸಲಾಗಿದೆ. ಬ್ಯಾರಿಗೇಡ್ ಗಳನ್ನೂ ಜೋಡಿಸಲಾಗುತ್ತಿದೆ.

ಡಿಐಜಿ ಲೋಕೇಶ್ ಕುಮಾರ್ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಎಸ್ಪಿಗಳು‌ ಹಾಗೂ ಸಿಬ್ಬಂದಿಯನ್ನು‌ ಭದ್ರತೆಗೆ ಕರೆಯಿಸಿಕೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.