ಬೀಜಿಂಗ್: ಐತಿಹಾಸಿಕ ಕರ್ತಾರ್ಪುರ ಕಾರಿಡಾರ್ ಬಳಕೆಗೆ ಮುಕ್ತವಾಗಿದ್ದನ್ನು ಚೀನಾ ಸೋಮವಾರ ಸ್ವಾಗತಿಸಿದೆ.
‘ಭಾರತ–ಪಾಕಿಸ್ತಾನ ನಡುವೆ ಇಂತಹ ಬೆಳವಣಿಗೆಗಳನ್ನು ಸ್ವಾಗತಿಸಲಾಗುತ್ತದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಭಾರತ–ಪಾಕಿಸ್ತಾನ ಸೌಹಾರ್ದಯುತ ನಿಲುವು ತೋರಬಹುದು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶ್ವಾಂಗ್ ಹೇಳಿದ್ದಾರೆ.
‘ದಕ್ಷಿಣ ಏಷ್ಯಾದಲ್ಲಿ ಉಭಯ ರಾಷ್ಟ್ರಗಳೂ ಪ್ರಮುಖವಾದವು. ಈ ರಾಷ್ಟ್ರಗಳ ನಡುವೆ ಸೌಹಾರ್ದ, ಶಾಂತಿ ಇದ್ದರೆ ಪರಸ್ಪರರ ಹಾಗೂ ಜಗತ್ತಿನ ಹಿತಾಸಕ್ತಿಗಳಿಗೆ ಒಳಿತು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.