ADVERTISEMENT

ದುಬೈ: ಶನಿವಾರವೂ ಭಾರತೀಯ ಕಾನ್ಸುಲೇಟ್ ಕಾರ್ಯನಿರ್ವಹಣೆ

ವಿಮಾನ ಅಪಘಾತ; ಭಾರತೀಯರಿಗೆ ನೆರವು

ಪಿಟಿಐ
Published 8 ಆಗಸ್ಟ್ 2020, 6:38 IST
Last Updated 8 ಆಗಸ್ಟ್ 2020, 6:38 IST
ಕೋಯಿಕ್ಕೋಡ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದ ದೃಶ್ಯ
ಕೋಯಿಕ್ಕೋಡ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದ ದೃಶ್ಯ   

ದುಬೈ: ಕೊಯಿಕ್ಕೋಡ್‌ನ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ಪ್ರಯಾಣಿಸುವವರಿಗೆ ನೆರವಾಗುವುದಕ್ಕಾಗಿ ಇಲ್ಲಿ ಭಾರತೀಯ ರಾಯಭಾರ ಕಚೇರಿ ಶನಿವಾರವೂ ಕಾರ್ಯನಿರ್ವಹಿಸುತ್ತಿದೆ.

’ವಿಮಾನ ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರು ಮತ್ತು ಮೃತಪಟ್ಟಿರುವ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರೆಲ್ಲರಿಗೂ ನೆರವಾಗಲು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ’ ಎಂದು ರಾಯಭಾರಿ ಕಚೇರಿ ಶುಕ್ರವಾರ ಸಂj ಟ್ವೀಟ್ ಮಾಡಿದೆ.

ದುಬೈನ ಭಾರತೀಯ ರಾಯಭಾರ ಕಚೇರಿಗೆ ಹೊಸದಾಗಿ ನೇಮಕಗೊಂಡಿರುವ ಕಾನ್ಸುಲ್‌ ಜನರಲ್ ಡಾ. ಅಮನ್ ಪುರಿ, ’ಅಪಘಾತಗೊಂಡ ವಿಮಾನದಲ್ಲಿ ಎಲ್ಲ ವರ್ಗದ ಭಾರತೀಯರು ಪ್ರಯಾಣ ಮಾಡುತ್ತಿದ್ದರು. ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಹೋಗುತ್ತಿದ್ದರು. ಇನ್ನು ಕೆಲವರು ಉದ್ಯೋಗ ಕಳೆದುಕೊಂಡವರು ಇದ್ದರು. ಕೆಲವರು ವೈದ್ಯಕೀಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದರು’ ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಕೊಯಿಕ್ಕೋಡ್ ವಿಮಾನ ಅಪಘಾತದ ಸಂಬಂಧದ ಮಾಹಿತಿ ನೆರವಿಗಾಗಿ ದುಬೈ, ಶಾರ್ಜಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ.ಅವು ಹೀಗಿವೆ; +97156 5463903, +971543090572, +971543090571, +971543090575. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶಾರ್ಜಾ ಸಹಾಯವಾಣಿ +971 6 5970303.

ನವೀಕರಣಗಳಿಗಾಗಿ ಶಾರ್ಜಾದಲ್ಲಿ ಕರೆ ಮಾಡಲು ಸಹಾಯವಾಣಿ ಸಂಖ್ಯೆ +97165970303 ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.