ADVERTISEMENT

ಪ್ರತಿಮೆಯೆಂಬ ಭ್ರಮೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 17:39 IST
Last Updated 16 ಮೇ 2019, 17:39 IST

‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಪ್ರತಿಮೆ ಸ್ಥಾಪಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿರುವ ವರದಿಯನ್ನು ಓದಿ (ಪ್ರ.ವಾ., ಮೇ 16) ಅಚ್ಚರಿಗಿಂತ ಹೆಚ್ಚಾಗಿ ಅಯ್ಯೋ ಎನಿಸಿತು.

ಏಕೆಂದರೆ, ಯಾವುದೇ ಒಂದು ಪ್ರತಿಮೆಯನ್ನು ನೋಡುವುದರಿಂದ ವ್ಯಕ್ತಿಯ ನಡೆನುಡಿಯಲ್ಲಿ ಏನೊಂದೂ ಬದಲಾವಣೆ ಆಗುವುದಿಲ್ಲ. ಪ್ರತಿಮೆಯು ನೋಡುವ ಕಣ್ಣುಗಳಿಗೆ ಮುದ ನೀಡುವ ಕಲಾಕೃತಿಯೇ ಹೊರತು ಮತ್ತೇನಲ್ಲ. ಜನಸಮುದಾಯಕ್ಕೆ ಬೇಕಾಗಿರುವುದು ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವೇ ಹೊರತು ಪ್ರತಿಮೆಗಳಲ್ಲ. ಜನಪರವಾದ ಸಂಗತಿಗಳಿಗಾಗಿ ಹೋರಾಟ ಮಾಡುತ್ತಿರುವ ಸಂಘ ಸಂಸ್ಥೆಗಳು ಈ ಸಾಮಾಜಿಕ ವಾಸ್ತವವನ್ನು ಮನಗಂಡರೆ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅನೇಕ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬ ಅನಗತ್ಯವಾದ ಸಮಸ್ಯೆಯ ಸುಳಿಯಿಂದ ಪಾರಾಗಬಹುದು.

ಸಿ.ಪಿ.ನಾಗರಾಜ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.