ನಾನೊಬ್ಬ ಭಾರತೀಯ ಮುಸಲ್ಮಾನ. ನಾನೊಬ್ಬ ದೇಶಪ್ರೇಮಿ. ಆದರೆ, ನಮ್ಮ ಇಡೀ ಸಮುದಾಯವನ್ನು ಯಾವುದೋ ನೆಪದಡಿ ಸಾಮಾನ್ಯೀಕರಿಸಿ ಪಾಕಿಸ್ತಾನಪರ ಎಂಬರ್ಥದಲ್ಲಿ ಕೆಲವರು ಮಾತನಾಡಿದಾಗ ನನಗೆ ತುಂಬಾ ದುಃಖ ಹಾಗೂ ನೋವಾಗುತ್ತದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಮುಸಲ್ಮಾನರು ತಮ್ಮ ಜೀವನವನ್ನೇ ಬಲಿ ಕೊಟ್ಟಿದ್ದಾರೆ. ಇದಕ್ಕೆ ಇತಿಹಾಸವೇ ಸಾಕ್ಷಿ.
ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟಾದರೆ ಅದಕ್ಕೆ ಸರ್ಕಾರವೇ ಹೊಣೆ. ಜನರನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಯತ್ತ ಸರ್ಕಾರ ಮೊದಲು ಗಮನಹರಿಸಲಿ. ನಿರುದ್ಯೋಗ ನಿವಾರಣೆಗೆ, ಕುಡಿಯುವ ನೀರು ಪೂರೈಕೆಗೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಜರುಗಿಸಲಿ.
–ಇ.ಎಂ. ಖಾನ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.