ಲಾಕ್ಡೌನ್ ಸಮಯದಲ್ಲಿ ಊರಿನತ್ತ ಮುಖ ಮಾಡಿದ್ದ ಶ್ರಮಿಕ ವರ್ಗ, ಅನ್ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಪುನಃ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನತ್ತ ಮರುವಲಸೆ ಆರಂಭಿಸಿತು. ಅಂತೆಯೇ ದೇಶದಾದ್ಯಂತ ಸುಮಾರು 200 ರೈಲುಗಳು ವಿಶೇಷ ರೈಲಿನ ಹೆಸರಿನಲ್ಲಿ ಆರಂಭಗೊಂಡವು. ಆದರೆ, ಅದೇಕೊ ಕಲ್ಯಾಣ ಕರ್ನಾಟಕದ ಮುಖೇನ ಹಾದು ಹೋಗುವ ಸೊಲ್ಲಾಪುರ- ಹಾಸನ ಮತ್ತು ಬಾಗಲಕೋಟೆ- ಮೈಸೂರು ನಡುವಿನ ರೈಲು ಸೇವೆ ಆರಂಭಗೊಳ್ಳಲಿಲ್ಲ. ಈ ಎರಡು ರೈಲುಗಳ ಮುಖಾಂತರವೇ ಹೆಚ್ಚಿನ ಶ್ರಮಿಕರು ಬೆಂಗಳೂರು ತಲುಪುತ್ತಾರೆ. ರಾಜ್ಯದವರೇ ಆದ ಕೇಂದ್ರದ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿಯವರಿಗೆ ಹಲವಾರು ಟ್ವೀಟ್ಗಳ ಮೂಲಕ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.
ಇತ್ತೀಚೆಗಷ್ಟೇ ಕಲ್ಯಾಣ ಕರ್ನಾಟಕ ದಿನ ಆಚರಿಸಲಾಗಿದೆ. ಶ್ರಮಿಕ ವರ್ಗಕ್ಕೆ ರೈಲು ಆರಂಭಿಸಲಾಗದ ವ್ಯವಸ್ಥೆಯಲ್ಲಿ ನಿಜವಾದ ಕಲ್ಯಾಣ ಆಗುವುದೆಂದು ಎಂಬ ಹಲವರ ಗೊಣಗಾಟದಲ್ಲಿ ಅರ್ಥವಿದೆ ಎನಿಸುತ್ತದೆ.
-ವೆಂಕಟೇಶ ಮುದ್ಗಲ್, ಕಲಬುರ್ಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.