ರಾಜ್ಯದಲ್ಲಿ ಲಾಕ್ಡೌನ್ ಪ್ರಯುಕ್ತ, ಬೆಳಿಗ್ಗೆ 6ರಿಂದ 10 ಗಂಟೆಯವರೆಗೂ ದೈನಂದಿನ ಬದುಕಿಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಕಾಲ್ನಡಿಗೆಯಲ್ಲಿ ಹೋಗಬೇಕು, ಯಾವುದೇ ವಾಹನ ಬಳಸುವಂತಿಲ್ಲವೆಂಬ ಆದೇಶವಿದೆ. ವಯೋವೃದ್ಧರು, ಅಶಕ್ತರು ಮಾರುಕಟ್ಟೆಗೆ ಹೋಗಿ ದವಸಧಾನ್ಯಗಳಿಂದ ತುಂಬಿದ ಭಾರವಾದ ಚೀಲಗಳನ್ನು ಹೊತ್ತು ತರಲು ಸಾಧ್ಯವಿಲ್ಲ. ಹೀಗಾಗಿ ಅಂತಹವರಿಗೆ ಅವಶ್ಯಕ ವಸ್ತು ಖರೀದಿಸಲು, ಶುದ್ಧ ನೀರು ತರುವ ಸಲುವಾಗಿ ವಾಹನ ಬಳಸಲು ಅನುಮತಿ ನೀಡಬೇಕು.
–ಎ.ಎಸ್.ಮಕಾನದಾರ, ಗದಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.