ವ್ಯಕ್ತಿಯೊಬ್ಬರಿಗೆ ಆಮಿಷವೊಡ್ಡಿ ₹ 65 ಲಕ್ಷ ವಂಚಿಸಲಾಗಿದೆ (ಪ್ರ.ವಾ., ಆ. 27). ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಯುವತಿಯೊಬ್ಬರು ಜ್ಯೋತಿಷಿಯೊಬ್ಬನಿಂದ ₹ 30 ಲಕ್ಷ ಮೋಸಹೋಗಿದ್ದು ಇತ್ತೀಚೆಗಷ್ಟೇ ವರದಿಯಾಗಿತ್ತು. ಬೃಹತ್ ಪ್ರಮಾಣದಲ್ಲಿ ನಡೆದ ಐಎಂಎ ವಂಚನೆ ಹಗರಣ ಇನ್ನೂ ಕಣ್ಣಮುಂದೆಯೇ ಇದೆ. ಇಷ್ಟಾದರೂ ಜನ ಎಚ್ಚೆತ್ತುಕೊಳ್ಳದೇ ಇರುವುದು ದುರಂತವೇ ಸರಿ. ಅದರಲ್ಲೂ ಬಹುತೇಕ ವಿದ್ಯಾವಂತರೇ ಇಂತಹವುಗಳಿಗೆ ಬಲಿಯಾಗುತ್ತಿರುವುದನ್ನು ನೋಡಿದರೆ, ಅದಕ್ಕೆ ದುರಾಸೆಯೇ ಕಾರಣ ಎನಿಸುತ್ತದೆ. ಶೀಘ್ರವಾಗಿ ಹಣ ಮಾಡಿಕೊಳ್ಳುವ ಧಾವಂತಕ್ಕೆ ಬಲಿಯಾಗದೆ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿದರೆ ಇಂಥ ವಂಚನೆಗಳು ಕಡಿಮೆಯಾದಾವು.
-ಪತ್ತಂಗಿ ಎಸ್. ಮುರಳಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.