ADVERTISEMENT

ವಾಚಕರ ವಾಣಿ| ಮಾನವ– ಪ್ರಾಣಿ ಸಂಘರ್ಷ: ಅರಿಯಿರಿ ಕಾರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 19:31 IST
Last Updated 24 ಜನವರಿ 2023, 19:31 IST

ಇತ್ತೀಚಿನ ದಿನಗಳಲ್ಲಿ ವನ್ಯಮೃಗಗಳ ದಾಳಿಯ ಪ್ರಸಂಗಗಳು ಹೆಚ್ಚುತ್ತಿವೆ. ದಾಳಿಯಾದ ಸ್ಥಳಗಳಲ್ಲಿ ಹುಲಿ, ಚಿರತೆಗಳನ್ನು ಸೆರೆಹಿಡಿಯಲು ಸಾಮಾನ್ಯವಾಗಿ ಬೋನುಗಳನ್ನು ಇರಿಸಲಾಗುತ್ತದೆ. ಆದರೆ ವನ್ಯಜೀವಿಗಳು ಏಕೆ ನಾಡಿನತ್ತ ಬರುತ್ತಿವೆ ಹಾಗೂ ಅವುಗಳ ದಾಳಿ ಪ್ರಕರಣಗಳು ಏಕೆ ಹೆಚ್ಚುತ್ತಿವೆ ಎಂಬುದನ್ನು ನಾವು ತಿಳಿದುಕೊಳ್ಳುತ್ತಿಲ್ಲ. ದಾಳಿಗಳು ಸಂಭವಿಸುವ ಪ್ರದೇಶಗಳಲ್ಲಿ ವನ್ಯಜೀವಿಗಳಿಗಿರುವ ಅಡಚಣೆಗಳೇನು ಎಂಬುದನ್ನು ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳು ಮೊದಲು ತಿಳಿದುಕೊಳ್ಳಬೇಕು. ಇಂತಹ ದಾಳಿಗಳು ಮರುಕಳಿಸದಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು.

- ಗುರುಸ್ವಾಮಿ ಜೆ., ಕುಳ್ಳೂರು, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT