ADVERTISEMENT

ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:58 IST
Last Updated 18 ಸೆಪ್ಟೆಂಬರ್ 2025, 4:58 IST
   

ದೇವದಾಸಿಯರ ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಧನ ಎಂಬ ಯೋಜನೆಯನ್ನು ರಾಜ್ಯ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ಪ್ರಾರಂಭಿಸಿದೆ.

2019 ರ ನಂತರ ವಿವಾಹವಾದ ಪರಿಶಿಷ್ಟ ಪಂಗಡಕ್ಕೆ ಸೇರಿದ ದೇವದಾಸಿ ಸಮುದಾಯದ ದಂಪತಿಗಳಿಗೆ ₹8 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.

ವರನಿಗೆ ₹3ಲಕ್ಷ ಹಾಗೂ ವಧುವಿಗೆ ₹5ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.

ADVERTISEMENT

ಅರ್ಹತೆಗಳು

ದಂಪತಿಗಳು ಹಿಂದೂ ಧರ್ಮದವರಾಗಿದ್ದು, ಕರ್ನಾಟಕದಲ್ಲಿ ವಾಸಿಸುತ್ತಿರಬೇಕು

ದಂಪತಿಗಳ ಒಟ್ಟು ವಾರ್ಷಿಕ ಆದಾಯ ₹5ಲಕ್ಷಕ್ಕಿಂತ ಕಡಿಮೆ ಇರಬೇಕು

ವಿವಾಹವಾಗಿ 18 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಿದವರು ಮಾತ್ರ ಯೋಜನೆಗೆ ಅರ್ಹರು

ಈ ಯೋಜನೆಯನ್ನು ಪಡೆಯಲು ಒಬ್ಬ ಸಂಗಾತಿಯು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಹಂತ 1: ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಸ್ಕ್ರೀನ್ ಬಲ ಭಾಗದಲ್ಲಿ, "ದೇವದಾಸಿ ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಧನ‘ ಎಂಬ ಗುಂಡಿಯನ್ನು ಒತ್ತಿ.

ಹಂತ 3: ಯೋಜನೆಯ ಮುಖಪುಟದ ಕೆಳ ಭಾಗದಲ್ಲಿರುವ ನೋಂದಣಿಯನ್ನು ಆಯ್ಕೆ ಮಾಡಿ.

ಹಂತ 4: ಆನ್‌ಲೈನ್ ನೋಂದಣಿಯಲ್ಲಿ, ಅರ್ಜಿಯ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ

ಹಂತ 5: ನೀವು ಒದಗಿಸಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ಅರ್ಜಿ ಪೂರ್ಣಗೊಂಡ ಬಳಿಕ "ಸಲ್ಲಿಸು" ಎಂಬುವುದನ್ನು ಒತ್ತಿ. ನಂತರ ನೀವು ಇಲಾಖೆಯಿಂದ ಎಸ್ಎಂಎಸ್ ಮೂಲಕ ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ

ಹಂತ 6: ಉಲ್ಲೇಖಕ್ಕಾಗಿ ಸ್ವೀಕೃತಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ

ಅಗತ್ಯವಿರುವ ದಾಖಲೆಗಳು

ಆಧಾರ್ ಕಾರ್ಡ್

ಬ್ಯಾಂಕ್ ಖಾತೆ ವಿವರಗಳು

ವಿವಾಹ ನೋಂದಣಿ ಪ್ರಮಾಣಪತ್ರ

ದಂಪತಿ ಭಾವಚಿತ್ರ

ಆದಾಯ ಪ್ರಮಾಣಪತ್ರ ಸಂಖ್ಯೆ

ಜಾತಿ ಪ್ರಮಾಣಪತ್ರ ಸಂಖ್ಯೆ

ಮೊಬೈಲ್ ಸಂಖ್ಯೆ

ನಿವಾಸಿ ಪುರಾವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.