ADVERTISEMENT

ಅಭ್ಯಾಸ ನಿಲ್ಲಿಸಿದ ಸಿಎಸ್‌ಕೆ ಆಟಗಾರರು

ಪಿಟಿಐ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST
ಅಭ್ಯಾಸ ನಡೆಸಲು ಬಂದ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ –ಪಿಟಿಐ ಚಿತ್ರ
ಅಭ್ಯಾಸ ನಡೆಸಲು ಬಂದ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ –ಪಿಟಿಐ ಚಿತ್ರ   

ಚೆನ್ನೈ: ಐಪಿಎಲ್‌ನಲ್ಲಿ ಭಾಗವಹಿಸಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ಅಭ್ಯಾಸವನ್ನು ಶುಕ್ರವಾರ ರದ್ದು ಮಾಡಲಾಗಿದೆ.

ಮೂರು ಬಾರಿಯ ಚಾಂಪಿಯನ್‌ ಸಿಎಸ್‌ಕೆ ತಂಡ ಇದೇ ತಿಂಗಳ ಎರಡರಿಂದ ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ತಾಲೀಮು ಆರಂಭಿಸಿತ್ತು. ನಾಯಕ ಮಹೇಂದ್ರ ಸಿಂಗ್‌ ಧೋನಿ, ಸುರೇಶ್‌ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜ, ಮುರಳಿ ವಿಜಯ್‌, ಪೀಯೂಷ್‌ ಚಾವ್ಲಾ ಸೇರಿದಂತೆ ಹಲವು ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಇವರನ್ನು ನೋಡಲು ನಿತ್ಯವೂ ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಿದ್ದರು.

‘ಕೊರೊನಾ ಸೋಂಕು ಹರಡುವ ಅಪಾಯದಿಂದಾಗಿ ಆಟಗಾರರ ಅಭ್ಯಾಸ ರದ್ದು ಮಾಡಲು ನಿರ್ಧರಿಸಿದ್ದೇವೆ’ ಎಂದು ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ (ಟಿಎನ್‌ಸಿಎ) ಕಾರ್ಯದರ್ಶಿ ಆರ್‌.ಎಸ್‌.ರಾಮಸ್ವಾಮಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.