ADVERTISEMENT

ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದಾರೆ: ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ

ಏಜೆನ್ಸೀಸ್
Published 12 ಜನವರಿ 2021, 3:21 IST
Last Updated 12 ಜನವರಿ 2021, 3:21 IST
ಬಾಬುಲ್ ಸುಪ್ರಿಯೊ
ಬಾಬುಲ್ ಸುಪ್ರಿಯೊ   

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾ ಮೂಲಕ ಕೊನೆಯಾಗಿದೆ. ಸಿಡ್ನಿಯಲ್ಲಿ ಸೋಮವಾರ ನಡೆದ ಐದನೇ ದಿನದಾಟದಲ್ಲಿ ಭಾರತ ತಂಡ ಟೆಸ್ಟ್ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸುದೀರ್ಘ ಓವರ್ ಎದುರಿಸಿದ ಹನುಮ ವಿಹಾರಿ, ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ಸುಪ್ರಿಯೋ ಆರೋಪ

ಸಂಸದ ಬಾಬುಲ್ ಸುಪ್ರಿಯೊ, ಹನುಮ ವಿಹಾರಿ ಕುರಿತು ಟ್ವೀಟ್ ಮಾಡಿದ್ದು, ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಗೆಲುವಿನ ಅವಕಾಶವಿದ್ದರೂ, ಅದನ್ನು ಮಾಡದೇ, ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದಾರೆ. 109 ಎಸೆತ ಎದುರಿಸಿ ಕೇವಲ 7 ರನ್ ಗಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಕೊನೆಯ ಸಾಲಿನಲ್ಲಿ, ನನಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲ ಎಂದು ನನಗೆ ತಿಳಿದಿದೆ ಎಂದೂ ಟ್ವೀಟ್ ಮಾಡಿದ್ದಾರೆ.

ADVERTISEMENT

ಸಂಸದರಿಗೆ ಟ್ವಿಟರ್‌ನಲ್ಲಿ ತರಾಟೆ

ಭಾರತದ ಟೆಸ್ಟ್ ಪಂದ್ಯದ ಕುರಿತು ಜನರು ಶ‌್ಲಾಘಿಸುತ್ತಿರುವಂತೆಯೇ, ಸಂಸದ ಬಾಬುಲ್ ಮಾಡಿರುವ ಟ್ವೀಟ್ ಬಗ್ಗೆ ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮ ವಿಹಾರಿ ಮತ್ತು ಟೆಸ್ಟ್ ಪಂದ್ಯದ ಕುರಿತು ಏನೂ ಅರಿಯದ ನೀವು ದಯವಿಟ್ಟು ರಾಜಕೀಯದಲ್ಲೇ ಇರಿ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.